ತಮಿಳುನಾಡು:- ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆ ಇಂದು ಸಂತ್ರಸ್ತರನ್ನು ಕಮಲ್ ಹಾಸನ್ ಅವರು ಭೇಟಿ ಮಾಡಿದ್ದಾರೆ.
ಏಲಕ್ಕಿಯನ್ನು ಕಲ್ಲು ಸಕ್ಕರೆ ಜೊತೆಗೆ ತಿಂದರೆ ಈ ಕಾಯಿಲೆ ನಿಮ್ಮ ಬಳಿ ಸುಳಿಯಲ್ಲ..!
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳ್ಳಭಟ್ಟಿ ಕುಡಿದು ಮೃತಪಟ್ಟರು ಮದ್ಯಪಾನದ ಬಗ್ಗೆ ಅಸಡ್ಡೆ ತೋರಿದ್ದಾರೆ ಎಂದು ಹೇಳಿದ್ದಾರೆ.
ಅವರು ಜಾಗರೂಕರಾಗಿರುವುದರೊಂದಿಗೆ ತಮ್ಮ ಕಾಳಜಿ ವಹಿಸಬೇಕು. ಅವರ ಆರೋಗ್ಯದ ಬಗ್ಗೆ ಸಲಹೆ, ಸೂಚನೆ ನೀಡುವ ಮನೋವೈದ್ಯಕೀಯ ಕೇಂದ್ರಗಳನ್ನು ರಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಳ್ಳಭಟ್ಟಿ ಕುಡಿತಕ್ಕೆ ಒಳಗಾಗಿರುವವರು ಅದು ಸಾಂದರ್ಭಿಕ ಕುಡಿತ ಅಥವಾ ಸಾಮಾಜಿಕ ಕುಡಿತ ಆಗಿರಬೇಕು. ಆದರೆ ಯಾವುದೇ ಕಾರಣಕ್ಕೂ ಮಿತಿಮೀರಬಾರದು. ಅದು ಕೆಟ್ಟದು ಎಂದು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.