ಚನ್ನಪಟ್ಟಣ:- ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದಕ್ಕೂ ನನಗೂ ಯಾವ ಸಂಬಂಧವಿಲ್ಲ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ…
Mysore: ಸರಣಿ ಅಪಘಾತ; 6 ಕಾರುಗಳು ಜಖಂ..!
ಈ ಸಂಬಂಧ ಮಾತನಾಡಿದ ಅವರು,ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದಕ್ಕೂ ನನಗೂ ಯಾವ ಸಂಬಂಧವಿಲ್ಲ. ಆ ಕಂಪನಿ ಚಟುವಟಿಕೆ ಮುಂದುವರಿಸಲು ನಾನು ಸಹಿ ಹಾಕಿರುವುದು. 1738 ಕೋಟಿ ರೂ. ಅವಶ್ಯಕತೆ ಇದೆ, ಆ ಹಣವನ್ನು ಕ್ರೋಡೀಕರಿಸಬೇಕಲ್ಲ. ಅದಕ್ಕೆ ಅವರು ಎರಡು ಬ್ಯಾಂಕ್ಗಳಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಸಾಲ ಪಡೆಯಲು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕು. ಆ ಒಪ್ಪಿಗೆಗೆ ನಾನು ಆ ಫೈಲ್ ಕಳುಹಿಸಿದ್ದೇನೆ ಎಂದರು.
ನನ್ನಿಂದ ಹೊಸ ಮೈನಿಂಗ್ ಮಾಡುವ ಯಾವುದೇ ನಿರ್ಧಾರವಾಗಿಲ್ಲ. ಈಗ ಸೆಷನ್ ಶುರುವಾಗಿದೆ, ನಮ್ಮನ್ನೆಲ್ಲಾ ಆಹ್ವಾನ ಮಾಡಿದ್ದಾರಲ್ಲವೇ, ನಮ್ಮಿಂದ ಸಿಎಂ ಏನು ನಿರೀಕ್ಷೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಒಬ್ಬ ಸಚಿವರಾದರೂ ನನ್ನ ಬಳಿ ಚರ್ಚೆ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನಿರಾಕರಣೆ ವಿಚಾರ ಸದ್ಯ ರಾಜ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇನ್ನು ದೇವದಾರಿ ಬೆಟ್ಟದಲ್ಲಿ ಎಂದರು. ನನ್ನ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡಿಕೊಂಡು ಹೋಗುತ್ತಿದ್ದಾರೆ. ಜನರ ಮಧ್ಯೆ ನಾನೇ ಮಾಡಿರುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಹೊಸ ಇಂಡಸ್ಟ್ರಿ ತರುವ ವಿಚಾರವಾಗಿ ಮಾತನಾಡಿದ್ದು, ನಾನು ಮಂತ್ರಿಯಾಗಿ ಹದಿನೈದು ದಿನವಾಗಿದೆ. ಇಲಾಖೆಯ ವಿಷಯಗಳನ್ನು ಕ್ರೂಢಿಕರಿಸಿಕೊಳ್ಳಬೇಕು. ಎಂ ವಿಶ್ವೇಶ್ವರಯ್ಯ ಹಾಗೂ ಒಡೆಯರ ಕಾಲದಲ್ಲಿ ಕಟ್ಟಲಾದ ಸಂಸ್ಥೆಗಳು ಬೆಂಗಳೂರು ನಗರದಲ್ಲಿ ಎಲ್ಲವನ್ನೂ ನಾಶ ಮಾಡಿದ್ದಾರೆ. ನಾವೆಲ್ಲ ಸಣ್ಣ ಮಕ್ಕಳಿದ್ದಾಗ, ಐಟಿಐ ಇತ್ತು. ಎಚ್ಎಎಲ್ ಇತ್ತು, ಎಚ್ಎಮ್ಟಿ ಇತ್ತು.
ಬೆಳಿಗ್ಗೆ ಎಚ್ಎಮ್ಟಿ ಬಸ್ಸು, ಐಟಿಐ ಬಸ್ಸುಗಳು ಓಡಾತ್ತಿದ್ದವು. ಆದರೆ ಇವತ್ತು ಆ ಸಂಸ್ಥೆಗಳು ಎಲ್ಲಿವೆ. ಕೋಟ್ಯಾಂತರ ಬೆಲೆ ಬಾಳುವ ಭೂಮಿ ಆಗಿನ ಸರಕಾರಗಳು ಮಾರಾಟ ಮಾಡಿದ್ದಾರೆ. ನಿನ್ನೆ ಮೂರುವರೆ ಗಂಟೆ ಎಚ್ಎಮ್ಟಿ ಸಂಸ್ಥೆಯವರ ಜೊತೆ ಮಾತಾಡಿದೆ. ಸಂಸ್ಥೆಯ ಜಮೀನು ಮಾರಾಟ ಮಾಡಿ ವೇತನ ನೀಡುವ ಪರಿಸ್ಥಿತಿ ಇದೆ ಎಂದು ಹೇಳಿದರು.