ಬೆಂಗಳೂರು: ಐಷಾರಾಮಿ ಲೈಫ್ ಸ್ಟೈಲ್, ಬಾಡಿ ಫಿಟ್ನೆಸ್ಗಾಗಿ ಹೆಲ್ತಿ ಫುಡ್ ಜೊತೆಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ನಟ ದರ್ಶನ್, ಗೆಳತಿ ಪವಿತ್ರಾ ಅಂಡ್ ಗ್ಯಾಂಗ್ ಜೊತೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಅಷ್ಟಕ್ಕೂ ನಟ ದರ್ಶನ್ ಅಂಡ್ ಪಟಾಲಂನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಚರಿ ಹೇಗಿದೆ ಅಂತೀರಾ….? ಈ ಸ್ಟೋರಿ ನೋಡಿ………..
ಆನಂದ ಮಾರ್ಗ ಆಶ್ರಮದಲ್ಲಿ ಸ್ವಾಮೀಜಿಯ ಬರ್ಬರ ಹತ್ಯೆ..! ಇಬ್ಬರು ಸ್ವಾಮೀಜಿಗಳು ಸೇರಿ ಮೂವರು ಅರೆಸ್ಟ್!
ಹೌದು ರೇಣುಕ ಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನ ಸ್ಪೆಷಲ್ ಬ್ಯಾರಕ್ನ ಕೊಠಡಿಯಲ್ಲಿರುವ ನಟ ದರ್ಶನ್ ಅಕ್ಷರಶಃ ಹೌರಾಣಾಗಿ ಹೋಗಿದ್ದಾರೆ. ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದ ನಟ ದರ್ಶನ್ ಅಟ್ಯಾಚ್ಡ್ ಬಾತ್ ರೂಂ ಹೊರತುಪಡಿಸಿ ಸಾಮಾನ್ಯ ಬೆಡ್ ಮೇಲೆ ಹೊದಿಕೆ ಹೊದ್ದು ಮಲಗಬೇಕಾದ ಸ್ಥಿತಿ ಬಂದೋದಗಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮೂವರು ಆರೋಪಿಗಳ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ಆಗಮಿಸಿದ್ದು, ಪ್ರಮುಖ ಜೈಲಿನ ಸ್ಪೆಷಲ್ ಬ್ಯಾರಕ್ ನ ಕೊಠಡಿಯಲ್ಲಿ ಸಹಖೈದಿ ವಿನಯ್ ಜೊತೆ ದರ್ಶನ್ ಗೆ ಜೈಲುವಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲೇ ವಿಚಾರಣೆಯಿಂದ ದಣಿದಿದ್ದ ದರ್ಶನ್ ಜೈಲು ಸಿಬ್ಬಂದಿ ನೀಡಿದ ಮುದ್ದೆ ಅನ್ನ, ಸಾಂಬಾರ್ ಚಪಾತಿ ಮತ್ತು ಮಜ್ಜಿಗೆ ಸೇವಿಸಿ ಸಾಮಾನ್ಯ ಖೈದಿಯಂತೆ ಬೆಡ್ ಮೇಲೆ ಹೊದಿಕೆ ಹೊದ್ದು ತಡವಾಗಿ ನಿದ್ರೆಗೆ ಜಾರಿದ್ದನು. ಮುಂಜಾನೆ 6:40ರ ಸುಮಾರಿಗೆ ಎದ್ದು ಕಾಪಿ ಬದಲು ಬಿಸಿ ನೀರು ಕುಡಿದು ಒಲ್ಲದ ಮನಸ್ಸಿನಲ್ಲಿ ಪಲಾವ್ ಸೇವಿಸಿದ್ದಾನೆ. ಜೈಲಿನ ಬ್ಯಾರಕ್ ನಲ್ಲಿ ಪೇಪರ್ ಓದದೆ, ವಾಕಿಂಗ್ ಮಾಡದೆ ಕೊಠಡಿಯಲ್ಲಿ ಮಂಕಾಗಿದ್ದ ದರ್ಶನ್ ಮಧ್ಯಾಹ್ನ ಚಪಾತಿ, ಅನ್ನ ಸಾಂಬಾರ್ ಮಜ್ಜಿಗೆ ಸೇವಿಸಿದ್ದು, ಸಹ ಖೈದಿಗಳ ಜೊತೆ ಮಾತನಾಡದೆ ಮೌನವಾಗಿದ್ದಾನೆ.
ಇನ್ನೂ ಅತ್ತ ಮಹಿಳಾ ಬ್ಯಾರಕ್ ನಲ್ಲಿ ಸಹಖೈದಿಗಳ ಜೊತೆ ದಿನ ಕಳೆಯುತ್ತಿರುವ ಪವಿತ್ರಾ ಪಾಡು ಹೇಳತೀರದಾಗಿದೆ. ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಪವಿತ್ರಾ ನೆಟ್ಟಗೆ ನಿದ್ರಿಸದೆ ಹೊಟ್ಟೆಗೆ ಸರಿಯಾಗಿ ಊಟ ಉಪಹಾರ ಸೇವಿಸದೇ ಚಿಂತೆಯಲ್ಲಿ ಮುಳುಗಿದ್ದಾಳೆ. ನನ್ನ ಒಂದು ಸಣ್ಣ ತಪ್ಪಿನಿಂದ ರಾಜನಂತಿದ್ದ ನಟ ದರ್ಶನ್ ಕೊಲೆ ಆರೋಪಿಯಾಗಿ ಜೈಲುವಾಸ ಅನುಭವಿಸುವಂತಾಗಿದೆ ಎಂದು ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂಡಾಗಿದ್ದಾಳೆ. ಸಹಖೈದಿಗಳ ಸಾಂತ್ವನಕ್ಕು ತಣ್ಣಗಾಗದ ಪವಿತ್ರಾ ಕಣ್ಣೀರಾಗಿದ್ದಾಳೆ. ಈ ನಡುವೆ ಭಾನುವಾರ ರಜೆ ದಿನ ಹಿನ್ನೆಲೆ ದರ್ಶನ್ ಭೇಟಿಗೆ ಅವಕಾಶ ಇಲ್ಲದಿದ್ದರು ದೂರದ ರಾಯಚೂರಿನ ಲಿಂಗಸಗೂರಿನಿಂದ ಕ್ರೂಸರ್ ನಲ್ಲಿ ಬಂದಿದ್ದ ಅಭಿಮಾನಿಗಳು ದರ್ಶನ್ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ದರ್ಶನ್ ತಪ್ಪು ಮಾಡಿರಬಹುದು, ಆದ್ರೆ ಅವ್ರು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಅದರೂ ಡಿ ಬಾಸ್ ಮತ್ತು ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ತೋರಿಸಲಾಗುತ್ತಿದೆ ಎಂದು ಕಣ್ಷೀರು ಹಾಕಿದ್ದಾರೆ.