ಬೆಂಗಳೂರು: ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಹಾಗೂ ಸಾಮಾಜಿಕ ನೆಮ್ಮದಿ ಹಾಳು ಮಾಡುವ ವಿಕೃತಿ ಹೊಂದಿದ್ದ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾಶ್ಮೀರ ಮೂಲದ ವ್ಯಕ್ತಿಯನ್ನು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರುಬಂಧಿಸಿದ್ದಾರೆ. ಫಾಹಿಮ್ ಫಿರ್ ದೋಸ್ ಖುರೇಷಿ ಬಂಧಿತ ವ್ಯಕ್ತಿ. ಇತ ಇಲ್ಲಿಯೇ ವ್ಯಾಸಂಗ ಮಾಡಿ, ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನನಲ್ಲಿ ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ.
ತೂಕ ಕಡಿಮೆ ಮಾಡಿಕೊಳ್ಳುವಾಗ ಮೀನು ಮತ್ತು ಚಿಕನ್ʼಗಳಲ್ಲಿ ಯಾವುದು ಒಳ್ಳೆಯದು..? ಇಲ್ಲಿದೆ ನೋಡಿ
ಇದರ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಹಾಗೂ ಸಾಮಾಜಿಕ ನೆಮ್ಮದಿ ಹಾಳು ಮಾಡುವ ವಿಕೃತಿ ಹೊಂದಿದ್ದ ಫಾಹಿಮ್ ಫಿರ್ ದೋಸ್ ಖುರೇಷಿ, ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಹಲವಾರು ದೇಶ ವಿರೋಧಿ ಪೋಸ್ಟ್ ಹಾಕಿದ್ದ. ಅದರಲ್ಲೂ ‘When “I” is replaced by “We” India becomes wendia, Meaning we will end India’ ಎಂದು ಟ್ವೀಟ್ ಮಾಡಿದ್ದ. ಇದನ್ನೂ ಕೆಲ ದೇಶವಿರೋಧಿಗಳು ಶ್ಲಾಘಿಸಿದ್ದರು. ಈ ಹಿನ್ನಲೆ ಈ ದೇಶದ್ರೋಹಿ ಕೃತ್ಯವೆಸಗಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.