ವಿಜಯಪುರ:- ದರ್ಶನ್ ರಕ್ಷಣೆಗೆ ಕೆಲ ಕಾಂಗ್ರೆಸ್ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪಕ್ಕೆ ಜಮೀರ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಗಾಯದಿಂದ ಸುರಿಯುತ್ತಿರುವ ರಕ್ತ ದಿಢೀರ್ ನಿಲ್ಲಬೇಕಾ!?..ಈ ಟಿಪ್ಸ್ ಫಾಲೋ ಮಾಡಿ..!
ಈ ಸಂಬಂಧ ಮಾತನಾಡಿದ ಅವರು,ದರ್ಶನ್ ಪ್ರಕರಣದಲ್ಲಿ ಯಾರೂ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ನಾನೇ ಪೊಲೀಸರ ಮೇಲೆ ಒತ್ತಡ ಹಾಕಿದ್ದೇನೆಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ, ನಾನು ಒತ್ತಡ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು.
ದರ್ಶನ್ ಹಾಗೂ ನಾನು ಒಳ್ಳೆಯ ಸ್ನೇಹಿತರು ಆ ವಿಚಾರದಲ್ಲಿ ಇಲ್ಲ ಎಂದು ಹೇಳಲ್ಲ. ಇಂಥ ಘಟನೆ ಮಾಡಿದಾಗ ಯಾರು ಅವರ ಪರ ನಿಲ್ಲುತ್ತಾರೆ ಎಂದು ಪ್ರಶ್ನೆ ಮಾಡಿದರು. ತಪ್ಪು ತಪ್ಪೇ, ಉಪ್ಪು ತಿಂದವ ನೀರು ಕುಡಿಯಲೇಬೇಕು. ತಪ್ಪು ಯಾರೇ ಮಾಡಲಿ, ದರ್ಶನ್ ಇದ್ದರೂ ಅಷ್ಟೇ, ಇನ್ನೊಬ್ಬರು ಇದ್ದರಷ್ಟೇ ಶಿಕ್ಷೆ ಆಗಲೇಬೇಕು. ‘ನನ್ನ ಹೆಸರನ್ನ ಮಾಧ್ಯಮದಲ್ಲಿ ನೆರವಾಗಿ ಹೇಳಿಲ್ಲ, ಪರೋಕ್ಷವಾಗಿ ಹೇಳಿದ್ದಾರೆ ಎಂದರು
ದರ್ಶನ್ ವಿಚಾರದಲ್ಲಿ ಆತರ ಯಾವುದು ಇಲ್ಲ, ಕಾನೂನಿನ ಚೌಕಟ್ಟಿಯಲ್ಲಿ ತನಿಖೆ ನಡೆಯುತ್ತಿದೆ. ಅವರನ್ನ ಜೈಲಿಗೆ ಕಳಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮುಂದಿನ ತೀರ್ಮಾನ ಮಾಡುತ್ತದೆ. ದರ್ಶನ್ ಪರ ಕೈ ಶಾಸಕ ಗೋವಿಂದಗೌಡ ಮಾತನಾಡಿದ ವಿಚಾರ, ‘ ಅವರವರ ಅಭಿಪ್ರಾಯವದು, ಅವರ ಅಭಿಪ್ರಾಯ ಅವರು ಹೇಳಿದ್ದಾರೆ ಎಂದರು.