ಬೆಂಗಳೂರು:- ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ ಎಲ್ಲ ಆರೋಪಿಗಳ ಮೊಬೈಲ್ ತಪಾಸಣೆಗೆ ಕೋರ್ಟ್ ಅನುಮತಿ ನೀಡಿದೆ.
IND V/s BAN: ಹಾರ್ದಿಕ್ ಪಾಂಡ್ಯರನ್ನು ಹೊಗಳಿದ ಟೀಮ್ ಇಂಡಿಯಾ ಕ್ಯಾಪ್ಟನ್…!
ಆರೋಪಿಗಳನ್ನು ಸತತ ವಿಚಾರಣೆ ಮಾಡಿದ್ದಾರೆ, ಹಲವು ಕಡೆ ಸ್ಥಳ ಮಹಜರು ಮಾಡಿದ್ದಾರೆ. ನೂರಾರು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಸಾಕ್ಷಿಯನ್ನು ಪಡೆದುಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಅದುವೇ ಆರೋಪಿಗಳ ಮೊಬೈಲ್ ಪರಿಶೀಲನೆ. ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ಮೊಬೈಲ್ ಪರಿಶೀಲನೆಗೆ ನ್ಯಾಯಾಲಯ ಅನುಮತಿ ನೀಡಿದ್ದು, ಹಲವು ಮಹತ್ವದ ಅಂಶಗಳು ಇದರಿಂದ ಹೊರಗೆ ಬರುವ ಸಾಧ್ಯತೆ ಇದೆ.
ಆರೋಪಿ ರಾಘು ಹೊರತುಪಡಿಸಿ ಬಂಧಿತ ಎಲ್ಲ ಆರೋಪಿಗಳಿಂದ ಅವರ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟು ದಿನ ಅವನ್ನು ಸೀಲ್ ಮಾಡಿ ಇರಿಸಲಾಗಿತ್ತು. ಆದರೆ ಈಗ ನ್ಯಾಯಾಲಯ ಅನುಮತಿ ನೀಡಿರುವ ಕಾರಣ ಆ ಎಲ್ಲ ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ರವಾನಿಸಿ ಡಾಟಾ ರಿಟ್ರೀವ್ ಮಾಡಿಸಲಾಗುತ್ತದೆ. ಕೊಲೆಯಾದ ದಿನ ಯಾರು ಎಲ್ಲಿದ್ದರು, ಯಾರಿಗೆ ಕರೆ ಮಾಡಿದರು. ಮೊಬೈಲ್ನಲ್ಲಿ ಘಟನೆಯ ಚಿತ್ರ, ವಿಡಿಯೋ ಸೆರೆ ಹಿಡಿಯಲಾಗಿದೆಯೇ? ಯಾರು ಯಾರಿಗೆ? ಎಷ್ಟು ಹಣ ಕಳಿಸಿದರು. ಕೊಲೆ ನಡೆದಾಗ ಯಾರು ಎಲ್ಲಿದ್ದರು ಎಂಬ ಎಲ್ಲ ಮಾಹಿತಿಯೂ ಮೊಬೈಲ್ ಪರಿಶೀಲನೆಯಿಂದ ಹೊರಗೆ ಬರಲಿದೆ. ಇದು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಲಿದೆ.
ಆರೋಪಿ ರಾಘು ಹಾಗೂ ಸಂತ್ರಸ್ತ ರೇಣುಕಾ ಸ್ವಾಮಿಯ ಮೊಬೈಲ್ ಅನ್ನು ಆರೋಪಿಗಳು ಮೋರಿಗೆ ಎಸದಿದ್ದು, ಸತತ ಹುಡುಕಾಟದ ಬಳಿಕವೂ ಆ ಮೊಬೈಲ್ಗಳು ಸಿಕ್ಕಿಲ್ಲವಾದ್ದರಿಂದ ಅವರ ಮೊಬೈಲ್ ಸಿಮ್ಗಳನ್ನು ಹೊಸದಾಗಿ ಪಡೆದು, ಸಿಮ್ನ ಕರೆ ಮಾಹಿತಿಗಳನ್ನು ಪೊಲೀಸರು ತೆಗೆದುಕೊಳ್ಳಲು ನ್ಯಾಯಾಲಯ ಸೂಚಿಸಿದೆ