ವಿಜಯಪುರ:- ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಜಮೀನು ವಕ್ಫ್ ಆಸ್ತಿಯಿದೆ. ಅದನ್ನು ಬಡವರ ಕೆಲಸಕ್ಕೆ ಉಪಯೋಗಿಸಬೇಕು ಎಂಬ ಯತ್ನಾಳ್ ಹೇಳಿಕೆ ಜಮೀರ್ ಟಾಂಗ್ ನೀಡಿದ್ದಾರೆ.
IND V/s BAN ಬಾಂಗ್ಲಾ ವಿರುದ್ಧ 50 ರನ್ಗಳ ಅಮೋಘ ಜಯ ಸಾಧಿಸಿದ ಟೀಮ್ ಇಂಡಿಯಾ..!
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್, ಯತ್ನಾಳ್ ಆಸ್ತಿಯೋ, ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯೂ ಅಲ್ಲ, ಇದು ವಕ್ಪ್ ಆಸ್ತಿ ಎಂದು ಕಿಡಿಕಾದ್ದಾರೆ.
ವಕ್ಫ್ಗೆ ಆಸ್ತಿ ಕೊಟ್ಟಿರುವುದು ಯಾರು? ದಾನಿಗಳು ಕೊಟ್ಟಿದ್ದು. ನಮ್ಮಪ್ಪನ ಆಸ್ತಿ ಇದ್ದರೆ ಅದನ್ನ ಯಾರಿಗಾದರೂ ಕೊಡಬಹುದು. ಆದರೆ ಅದು ನನ್ನ ಆಸ್ತಿಯಲ್ಲ ಬಡವರಿಗೆ ಎತ್ತಿ ಕೊಡುವುದಕ್ಕೆ. ನಾಳೆ ಅವರ ಅಪ್ಪನ ಆಸ್ತಿಯಿದ್ದರೆ ಅದನ್ನು ಯಾರಿಗಾದರೂ ಕೊಡಬಹುದು ಎಂದಿದ್ದಾರೆ.
ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ನೀಡಿದ್ದಾರೆ. ದಾನ ಮಾಡಿದವರು ಯಾವುದಕ್ಕೆ ಉಪಯೋಗ ಮಾಡಬೇಕೆಂಬುದನ್ನು ಕೂಡ ತಿಳಿಸಿರುತ್ತಾರೆ. ಶಿಕ್ಷಣ, ಸ್ಮಶಾನ, ಈದ್ಗಾ, ಮಸೀದಿ ಕಟ್ಟಲು ಉಪಯೋಗಿಸಬೇಕೆಂದು ದಾನ ಮಾಡಿರುತ್ತಾರೆ ಎಂದು ಹೇಳಿದ್ದಾರೆ.