ಚಿಕ್ಕಮಗಳೂರು:- ಕಳಸ ತಾಲೂಕಿನ ಸೂರಮನೆ ಜಲಪಾತದ ಬಳಿ ಪ್ರವಾಸಿಗರ ಎಣ್ಣೆ ಪಾರ್ಟಿ ಮಾಡಿದ ದೃಶ್ಯ ಕಂಡು ಬಂದಿದೆ.
Breaking News: ತಿರುಪತಿ ಲಡ್ಡು ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ TTD..!
ಜಲಪಾತದ ಪಕ್ಕದಲ್ಲೇ ಕೂತು ಪ್ರವಾಸಿಗರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪ್ರವಾಸಿಗರ ವರ್ತನೆ ಕಂಡು ಫ್ಯಾಮಿಲಿ ಟೂರಿಸ್ಟ್ಗಳಿಗೆ ಕಿರಿ-ಕಿರಿ ಉಂಟಾಗಿದೆ. ಕಳಸ-ಹೊರನಾಡ ಬಹುತೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ಸ್ಥಳಗಳಲ್ಲಿ ಒಂದು. ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತವಾಗಿದೆ. ವೀಕೆಂಡ್ನಲ್ಲಿ ಪೊಲೀಸರನ್ನ ನಿಯೋಜನೆ ಮಾಡುವಂತೆ ಪ್ರವಾಸಿಗರ ಒತ್ತಾಯಿಸಿದ್ದಾರೆ.
ಸದ್ಯ ಎಲ್ಲೆಡೆ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ನಿಸರ್ಗ ಹಚ್ಚ ಹಸಿರಿನಿಂದ ಕೂಡಿದೆ. ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಇದೇ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೆಲ ಅನಾಚಾರಗಳು ನಡೆಯುತ್ತಿವೆ