ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಅವರನ್ನು ನೋಡಲು ಇಂದು ಅವರ ಕುಟುಂಬದವರು ಪರಪ್ಪನ ಅಗ್ರಹಾರ ಬಳಿ ಸೇರಿದರು.
ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡುಪವಿತ್ರಾ ಗೌಡ ತಮ್ಮ ಗರಂ ಆಗಿದ್ದಾರೆ. ನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾ ಎಂದು ಧಿಮಾಕು ತೋರಿದ್ದಾರೆ. ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಅಕ್ಕ ಸೈಲೆಂಟ್ ಆಗಿದ್ದಾರೆ. ಜೈಲಿನ ಹೊರಗಡೆ ತಮ್ಮ ಫುಲ್ ವೈಲೆಂಟ್ ಆಗಿದ್ದಾರೆ.
ಇನ್ನೂ ಪವಿತ್ರಾ ಗೌಡ ಭೇಟಿಗೆ ಪೋಷಕರು ಆಗಮಿಸಿದರು. ಪರಪ್ಪನ ಅಗ್ರಹಾರ ಜೈಲಿನ ಬಳಿ ಪೋಷಕರು ಆಗಮಿಸಿದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಆಗಿದ್ದಾರೆ. ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಪವಿತ್ರಾ ಗೌಡ ತಂದೆ, ತಾಯಿ, ತಮ್ಮ ಮತ್ತು ಚಿಕ್ಕಮ್ಮ ಭೇಟಿಗೆ ಆಗಮಿಸಿದರು.