ಬೆಂಗಳೂರು:– ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಲ್ಲಿ ದರ್ಶನ್ ಹೀಗಿನ ಸ್ಥಿತಿ ನೋಡಿದ್ರೆ ಅಯ್ಯೋ ಅನ್ಸತ್ತೆ.
Gadaga: ಇಂಧನ ಬೆಲೆ ಏರಿಕೆ ಹಿಂಪಡೆಯುವಂತೆ ಜೆಡಿಎಸ್ ನಿಂದ ಪ್ರತಿಭಟನೆ..!
ಸ್ಟೇಷನ್ನಲ್ಲೇ ಮಲಗಿ, ಎದ್ದು, ದಿನನಿತ್ಯ ತನಿಖೆಗೆ ಹಾಜರಾಗುತ್ತಿದ್ದಾರೆ. ಸದ್ಯ ದರ್ಶನ್ ಜೀವನ ಶೈಲಿ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.
ದರ್ಶನ್ ಕೆಲವು ವಾರಗಳ ಹಿಂದೆ ಸೆಲೆಬ್ರಿಟಿ ಜೀವನ ನಡೆಸುತ್ತಿದ್ದರು. ಇಷ್ಟ ಬಂದಾಗ ನಿದ್ದೆ ಮಾಡುತ್ತಿದ್ದರು, ಇಷ್ಟ ಬಂದಾಗ ಎದ್ದೇಳುತ್ತಿದ್ದರು. ಸಿನಿಮಾಗಾಗಿ ಹುರಿಗೊಳಿಸಿದ ದೇಹವನ್ನಾಗಿಸಲು ಜಿಮ್ಗೆ ಹೋಗಿ ಬರುತ್ತಿದ್ದರು.
ಇಷ್ಟೇ ಅಲ್ಲದೆ, ಸ್ನಾನಕ್ಕೆ ಐಷಾರಾಮಿ ಟಬ್ ಬಳಸುತ್ತಿದ್ದು. ತರಹೇವಾರಿ ತಿಂಡಿ ಸವಿಯುತ್ತಿದ್ದರು. ಇದರ ಜೊತೆ ಜೊತೆಗೆ ದರ್ಶನ್ ಗಾಗಿ ಸ್ನೇಹಿತರು, ಅಭಿಮಾನಿಗಳು ಕಾದಿರುತ್ತಿದ್ದರು. ಮಧ್ಯಾಹ್ನಕ್ಕೆ ಶುರುವಾಗುತ್ತಿದ್ದ ಪಾರ್ಟಿ, ತಡ ರಾತ್ರಿವರೆಗೂ ಬಿಂದಾಸ್ ಲೈಫ್, ಮಲಗೋದಕ್ಕೆ ಕಿಂಗ್ ಸೈಜ್ ಬೆಡ್ ಇಷ್ಟೆಲ್ಲಾ ಜೀವನ ನಡೆಸುತ್ತಿದ್ದ ದರ್ಶನ್ ಇದೀಗ ಪೊಲೀಸ್ ಠಾಣೆಯಲ್ಲಿ ದಿನ ದೂಡುವಂತಾಗಿದೆ. ಬೆಳಗ್ಗೆ 6 ಗಂಟೆಗೆ ಎದ್ದೇಳಬೇಕು. ಠಾಣೆಯ ಎಲ್ಲರೂ ಬಳಸುವ ಶೌಚಾಲಯ ಬಳಸಬೇಕು. ಜಿಮ್ ಇಲ್ಲ. ಸ್ನಾನ ಕೂಡ ಪ್ರತಿ ದಿನ ಇಲ್ಲ. ಇಡ್ಲಿ ವಡೆ ತಿನ್ನಬೇಕು. ನೆಲದ ಮೇಲೆ ಕೂರವಂತಾಗಿದೆ. ಇನ್ನು ಮಧ್ಯಾಹ್ನ ಅನ್ನ ಸಾಂಬರ್ ಸವಿಯಬೇಕು. ರಾತ್ರಿಗೂ ಅನ್ನ ಸಾಂಬಾರ್ ತಿನ್ನಬೇಕು. ದಿಂಬಿಲ್ಲದ ಹಾಸಿಗೆಯಲ್ಲಿ ಮಲಗುವಂತ ಪರಿಸ್ಥಿತಿ ಸದ್ಯ ದರ್ಶನ್ಗಿದೆಗಿದೆ ಎಂದು ಹೇಳಲಾಗಿದೆ.