ಬೆಂಗಳೂರು : ನಟ ದರ್ಶನ್ ಫಾರ್ಮ್ ಹೌಸ್ ಬಳಿ ವ್ಯಕ್ತಿಯೊರ್ವ ಸ್ಯೂಸೈಡ್ ಮಾಡಿಕೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಮರುಜೀವ ಪಡೆದುಕೊಂಡಿದೆ. ಹೌದು ಮಾಧ್ಯಮಗಳಲ್ಲಿ ದರ್ಶನ್ ಫಾರ್ಮ್ ಹೌಸ್ ಸ್ಯೂಸೈಡ್ ಕೇಸ್ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಿಡಿ..!
ಹೌದು ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಬಗ್ಗನ ದೊಡ್ಡಿ ಬಳಿಯ ದರ್ಶನ್ ಫಾರ್ಮ್ ಹೌಸ್ ಬಳಿ ಸ್ಯೂಸೈಡ್ ಮಾಡಿಕೊಂಡಿದ್ದ ಶ್ರೀಧರ್ ಪ್ರಕರಣ ಮರುಜೀವ ಪಡೆದುಕೊಂಡಿದೆ. ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗುತ್ತಿದ್ದಂತೆ, ಇತ್ತ ಬಗ್ಗನದೊಡ್ಡಿ ಬಳಿಯ ನಟ ದರ್ಶನ್ ಫಾರ್ಮ್ ಹೌಸ್ ಬಳಿ ಎರಡು ತಿಂಗಳ ಹಿಂದೆ ನಡೆದಿದ್ದ ಸ್ಯೂಸೈಡ್ ಕೇಸ್ ಮುನ್ನಲೆಗೆ ಬಂದಿದೆ. ಏಪ್ರಿಲ್ 16ನೇ ತಾರೀಖು ದರ್ಶನ್ ಫಾರ್ಮ್ ಹೌಸ್ ಬಳಿ ಕಗ್ಗಲಿಪುರದ ಶ್ರೀಧರ್ ಎಂಬಾತ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ, ವಿಚಾರ ತಿಳಿದು ಸ್ಥಳಕ್ಕಾಗಮಿಸಿದ್ದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಮತ್ತು ಸ್ಯೂಸೈಡ್ ಮುನ್ನ ಮಾಡಿದ್ದ ವಿಡಿಯೋ ಪತ್ತೆಯಾಗಿತ್ತು. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಮತ್ತು ವಿಡಿಯೋ ಮಾಡಿಗೆ ಆತ್ಮಹತ್ಯೆಗೆ ಶರಣಾಗಿದ್ದನು.
ಇನ್ನೂ ಇದರ ನಡುವೆ ನಟ ದರ್ಶನ್ ಫಾರ್ಮ್ ಹೌಸ್ ಜೊತೆ ಮೃತ ಶ್ರೀಧರ್ ತಳುಕು ಹಾಕಿಕೊಂಡಿದ್ದರಿಂದ ಮೃತನ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಹಾಗಾಗಿ ಇಂದು ಮೃತ ಶ್ರೀಧರ್ ತಂದೆ, ಅಕ್ಕ ಮತ್ತು ಬಾವನನ್ನು ಆನೇಕಲ್ ಪೊಲೀಸರು ಠಾಣೆಗೆ ಕರೆಸಿ ಹೇಳಿಕೆ ದಾಖಲು ಮಾಡಿದ್ದಾರೆ. ಮೃತನ ಬಳಿ ಸಿಕ್ಕ ಡೆತ್ ನೋಟ್ ಮತ್ತು ಮೊಬೈಲ್ ನಲ್ಲಿ ಸಿಕ್ಕ ವಿಡಿಯೋ ಅಸಲಿಯಾಗಿದೆ. ಆದರೆ ಮೃತ ಶ್ರೀಧರ್ ದುರ್ಗ ಕನ್ಸ್ಟ್ರಕ್ಷನ್ ನಲ್ಲಿ ಆರು ವರ್ಷದಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ಸಂಬಳ ನೀಡಿಲ್ಲ. ದುರ್ಗಾ ಕನ್ಟ್ರಕ್ಷನ್ ಮಾಲೀಕ ಕಿರಣ್ ಸೈಟ್ ಕೊಡುತ್ತೇನೆ ಎಂದು ನಂಬಿಸಿದ್ದ. ಹಾಗಾಗಿ ಶ್ರೀಧರ್ ಒಂದು ವರ್ಷದಿಂದ ಸಂಬಳ ಇಲ್ಲದೇ ಕೆಲಸ ಮಾಡಿದ್ದು. ಮನೆಯವರನ್ನು ಸಂಪರ್ಕಕ್ಕು ಸಿಗುತ್ತಿರಲಿಲ್ಲ. ಅಪ್ಪ ಅಮ್ಮನ ಜೊತೆ ಕೂಡ ಮಾತನಾಡುವುದನ್ನು ಬಿಟ್ಟಿದ್ದನು. ಸತ್ತ ಮಾರನೆ ದಿನ ಅವನ ಸ್ನೇಹಿತ ಕರೆ ಮಾಡಿ ಹೇಳಿದ್ದು, ನಾವು ಆನೇಕಲ್ಲಿಗೆ ಬಂದಾಗ ಪೋಸ್ಟ್ ಮಾರ್ಟಂ ಮಾಡಿದರು.ವಬಳಿಕ ಅಂತ್ಯ ಸಂಸ್ಕಾರವನ್ನು ಸಹ ಮಾಡಲಾಗಿತ್ತು. ನಿನ್ನೆ ಆನೇಕಲ್ ಪೊಲೀಸರು ಕರೆ ಮಾಡಿದ್ದರು. ಇಂದು ಪೊಲೀಸ್ ಠಾಣೆಗೆ ನಾನು ಹಾಗೂ ನನ್ನ ಮಗಳು ಬಂದಿದ್ದೇವೆ ಎಂದು ಮೃತನ ತಂದೆ ತಿಳಿಸಿದ್ದಾರೆ.
ಒಟ್ನಲ್ಲಿ ಮೃತ ಶ್ರೀಧರ್ ಸಾವು ನಟ ದರ್ಶನ್ ಫಾರ್ಮ್ ಹೌಸ್ ಜೊತೆ ತಳುಕು ಹಾಕಿಕೊಂಡಿದ್ದರಿಂದ ಹೆಚ್ಚು ಪ್ರಚಾರ ಪಡೆದುಕೊಂಡಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕಿದೆ.