ರಾಮನಗರ:- ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡದಲ್ಲಿ ಡಿಕೆಶಿ ನಿಂತಿರುವ ವಿಚಾರವಾಗಿ ಸಿಪಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣಕ್ಕೆ ಬರುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ. ಚನ್ನಪಟ್ಟಣಕ್ಕೆ ಬಂತು ಸ್ಪರ್ಧೆ ಅವರು ಮಾಡಲಿ. ಈ ಹಿಂದೆ ಇದ್ದ ಚನ್ನಪಟ್ಟಣ ತಾಲ್ಲೂಕಿನ ಸಾತನೂರು ಕ್ಷೇತ್ರದಿಂದ ಸ್ವರ್ಧೆ ಮಾಡುತ್ತಿದ್ದರು. ಚನ್ನಪಟ್ಟಣವನ್ನು ಕನಕಪುರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಕನಕಪುರ ಮಾಡಲ್ ಅಂದ್ರೆ ಏನು? ದೌರ್ಜನ್ಯ, ಕೊಲೆ ಸುಲಿಗೆ ನಾ? ಇದು ಕನಕಪುರ ಮಾಡೆಲ್ ನಾ ಎಂದು ಟಾಂಗ್ ಕೊಟ್ಟರು.
ನಾವು ಕುಮಾರಸ್ವಾಮಿ ಅವರು ಯಾವುದೇ ನಮ್ಮ ವಿರೋಧಿ ಪಕ್ಷಗಳ ಮುಖಂಡರ ವಿರುದ್ಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಲ್ಲ. ಕನಕಪುರದಲ್ಲಿ ಡಿಕೆ ಬ್ರದರ್ಸ್ ಮಾಡಿಸಿದ್ದಾರೆ. ಇದು ಕನಕಪುರ ಮಾಡೆಲ್ ನಾ? ಚನ್ನಪಟ್ಟಣದಲ್ಲಿ ಜನ ಆರ್ಥಿಕವಾಗಿ ಸದೃಢವಾಗಿದ್ದಾರೆ. ನೀರಾವರಿ ಅಭಿವೃದ್ಧಿಯಾಗಿದೆ. ಕನಕಪುರ ಏನಾಗಿದೆ?
ಜನಸಾಮಾನ್ಯರ ಬದುಕು ಸಾಮಾನ್ಯವಾಗಿ ಇದ್ಯಾ? ಜನಸಾಮಾನ್ಯರ ಬದುಕು ಅಲ್ಲಿ ಸದೃಢವಾಗಿ ಇಲ್ಲ. ನಿನ್ನೆ ಡಿಕೆ ಶಿವಕುಮಾರ್ ಬಂದಾಗ ನನಗೆ ಯಾಕೆ ಭಯ ಅಂದ್ರೆ ಅವರು ನಡೆದುಕೊಂಡ ರೀತಿ. ಅಧಿಕಾರಿಗಳನ್ನು ಬೆಂಗಳೂರಿಗೆ ಕರೆದು ಸಭೆ ಮಾಡುತ್ತಾರೆ. ತಾಲ್ಲೂಕು ಅಧಿಕಾರಿಗಳ ಸಭೆ ಮಾಡುವಾಗ ಫೋನ್ ಒಳಗಡೆ ಬಿಟ್ಟಿಲ್ಲ. ಮಾಧ್ಯಮದವರನ್ನು ಹೊರಗಡೆ ಇಟ್ಟು ಸಭೆ ಮಾಡುತ್ತಾರೆ. ಯಾಕೆ ಇದು ಖಾಸಗಿ ಕಾರ್ಯಕ್ರಮ ನಾ. ನಾನು ಕುಮಾರಸ್ವಾಮಿ ಕಾಲದಲ್ಲಿ ಯಾವುದೇ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಮಾಡಿಲ್ಲ. ಡಿಕೆ ಸುರೇಶ್ ಅವರ ಸೋಲಿನಿಂದ ಡಿಕೆಶಿ ಹತಾಶರಾಗಿದ್ದಾರೆ ಎಂದರು.
ಚನ್ನಪಟ್ಟಣದಲ್ಲಿ ವಾಮಾ ಮಾರ್ಗದಲ್ಲಿ ಚುನಾವಣೆ ಮಾಡಲು ಡಿಕೆಶಿ ಮುಂದಾಗಿದ್ದಾರೆ. ಚುನಾವಣೆ ನಮ್ಮಪರ ಇದೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸರ್ಕಾರದ ಮಾಡಿರುವುದು ಜನರ ಮುಂದೆ ಇದೆ. ಚನ್ನಪಟ್ಟಣಕ್ಕೆ ಮುಖ್ಯಮಂತ್ರಿ ಅಂತಾ ಘೋಷಣೆ ಕೂಗಿದಾಗಲೆ ಹತ್ತರಿಂದ ಹದಿನೈದು ಸಾವಿರ ಮತಗಳು ಕಡಿಮೆ ಆಗಿವೆ. ಚನ್ನಪಟ್ಟಣಕ್ಕೆ ಅವರ ಸಾಕ್ಷಿ ಗುಡ್ಡೆ ಏನಿದೆ. ಇದ್ರೆ ತೋರಿಸಲಿ ಎಂದರು.