ಶಿವಮೊಗ್ಗ:- ಜಿಲ್ಲೆಯ ಸಾಗರ ರಸ್ತೆಯ ಆಯನೂರು ಗೇಟ್ ಬಳಿ ಇರುವ ಸ್ಮಶಾನದಲ್ಲಿ ಹಣದ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಚುಚ್ಚಿ ಸ್ನೇಹಿತನ ಕೊಲೆ ಮಾಡಿದ ಘಟನೆ ಜರುಗಿದೆ.
ರಾಜು ನಾಯ್ಕ್ (30) ಮೃತ ರ್ದುದೈವಿ. ರಾಜು ಮತ್ತು ವಿಕ್ರಮ್ ಸ್ನೇಹಿತರಿಬ್ಬರು ಒಟ್ಟಿಗೆ ಕುಳಿತು ಎಣ್ಣೆ ಹೊಡೆದಿದ್ದಾರೆ. ಬಳಿಕ ಸ್ನೇಹಿತರ ನಡುವೆ ಹಣಕಾಸಿನ ವಿಚಾರವಾಗಿ ಕಿರಿಕ್ ಶುರುವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.
ರಾಜು ನಾಯ್ಕ್ ಬಳಿ 1800 ರೂಪಾಯಿ ಹಣವನ್ನು ಸಾಲವಾಗಿ ವಿಕ್ರಮ್ ಪಡೆದುಕೊಂಡಿದ್ದನು. 15 ದಿನಗಳ ಹಿಂದೆ ರಾಜು ನಾಯ್ಕ್ ತಂದೆ ತೀರಿ ಹೋಗಿದ್ದರು. ತಂದೆ ತೀರಿ ಹೋದ ಬಳಿಕ ಮನೆ ಪೇಟಿಂಗ್ಗೆ ವಿಕ್ರಮ್ನನ್ನು ಜೊತೆಗೆ ಸೇರಿಸಿಕೊಳ್ಳುತ್ತಾನೆ. ಇಬ್ಬರು ಪೇಟಿಂಗ್ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದರು. ಮನೆ ಪೇಟಿಂಗ್ನಿಂದ ಇಬ್ಬರು ನಡುವೆ ಪರಿಚಯವಾಗಿ ಸ್ನೇಹಿತರಾಗಿದ್ದರು. ಈ ನಡುವೆ ನಿನ್ನೆ ಎಂದಿನಂತೆ ಇಬ್ಬರು ಸೇರಿ ಸ್ಮಶಾನದೊಳಗೆ ಎಣ್ಣೆ ಹೊಡೆಯುತ್ತಿದ್ದರು. ರಾಜು ನಾಯ್ಕ್ ಕೊಟ್ಟಿರುವ ಸಾಲ ವಾಪಸ್ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಇದರಿಂದ ಕುಪಿತಗೊಂಡ ವಿಕ್ರಮ್ ತನ್ನ ಬಳಿ ಇದ್ದ ಚಾಕುವಿನಿಂದ ಸ್ನೇಹಿತ ರಾಜುಗೆ ಕತ್ತು ಮತ್ತು ಎದೆಗೆ ಇರಿದಿದ್ದಾನೆ. ಹಾಗೂ ಸಾವನ್ನಪ್ಪಿದ್ದಾನೆ.