ವಿಜಯಪುರ:– ವಾಂತಿ ಬೇಧಿಯಿಂದ ಬಳಲುತ್ತಿರುವ ನಾವದಗಿ ಗ್ರಾಮಕ್ಕೆ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು.
ಗಣಿಗಾರಿಕೆ ವೇಳೆ ಕಲ್ಲು ಬಂಡೆ ಬಿದ್ದು ಕಾರ್ಮಿಕ ಸಾವು.. ಬಂಡೆಯಡಿ ಪತ್ತೆಯಾದ ಶವ!
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ನಾವದಗಿ ಗ್ರಾಮದ ಹಲವು ಜನರು ಕಳೆದ ಹಲವು ದಿನಗಳಿಂದ ವಾಂತಿ ಭೇಧಿಯಿಂದ ಬಳಲುತ್ತಿದ್ದರು. ಕೆಲವರು ಈಗಾಗಲೇ ತಾಳಿಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ ಭೇಧಿಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾದ ಕಾರಣ ಸಿಇಒ ಭೇಟಿ ನೀಡಿದರು. ಈ ವೇಳೆ ಜನರ ಆರೋಗ್ಯದ ಸಮಸ್ಯೆಗೆ ಕಾರಣವನ್ನು ಆಲಿಸಿದ್ದಾರೆ.ಜನರ ಸಮಸ್ಯೆ ಪರಿಹರಿಸುವ ಭರವಸೆಯನ್ನು ಸಿಇಒ ರಿಷಿ ಆನಂದ ನೀಡಿದ್ದಾರೆ.