ಗದಗ:-ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ ಸರ್ಕಾರ ಎಂದು ಗದಗನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಡವರಿಗೆ ಎಲ್ಲ ರೀತಿಯ ತೆರಿಗೆ ಹೊರೆಯನ್ನ ಹಾಕಿ. ಅವರಿಂದಲೇ ಕಿತ್ತುಕೊಂಡು ಅವರಿಗೇ ಗ್ಯಾರಂಟಿ ಕೊಡ್ತೀವಿ ಅಂತಾ ಹೇಳಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳೋ ಕೃತ್ಯಕ್ಕೆ ಕೈ ಹಾಕಿದೆ. ಇದು ಬಡವರ ವಿರೋಧಿ. ವಿದ್ಯತ್ ದರ ಜೊತೆಗೆ ಲ್ಯಾಂಡ್ ರೆವೆನ್ಯೂ, ಮೋಟಾರ್ ವೆಹಿಕಲ್ ಟ್ಯಾಕ್ಸ್ ದರ ಏರಿಸಿದ್ದು, ಸ್ಟ್ಯಾಂಪ್ ಡ್ಯೂಟಿ ಹೆಚ್ಚು ಮಾಡಿರೋದು ಎಲ್ಲ ವಿಚಾರದಲ್ಲಿ ದರ ಏರಿಸಿದ್ದಾರೆ.
ಮದ್ಯದ ಟ್ಯಾಕ್ಸ್ ಹೆಚ್ಚು ಮಾಡಿದ್ರು. ಈಗ ಪೆಟ್ರೋಲ್ ಡೀಸೆಲ್ ಮೇಲೆ ಹೆಚ್ಚು ಮಾಡಿ ಒಂದಾದ ಮೇಲೆ ಒಂದು ಒಡವ, ಶ್ರೀ ಸಾಮಾನ್ಯನ ಮೇಲೆ ಗದಾ ಪ್ರಹಾರ ತೆರಿಗೆ ಹೊರೆ ಮುಖಾಂತರ ಮಾಡ್ತಿದೆ. ಇದು ಬಡವರ ವಿರೋಧಿ ಸರ್ಕಾರ. ಬಡವರಿಂದ ಕಿತ್ಕೊಂಡು ಅವರಿಗೇ ಕೊಟ್ಟು ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಿದೆ ಸರ್ಕಾರ. ಅದಕ್ಕಿಂತ ಆಘಾತಕಾರಿ ನಿರ್ಣಯ ಇಂದು ಮಾಡ್ತಿದ್ದಾರೆ
ಬಾಸ್ಟನ್ ಕಂಪನಿ ಅವರು ಕನ್ಸಲ್ಟೇಶನ್ ತಗೊಂಡಿದ್ದಾರೆ. ಆ ಮಹಾನುಭಾವರು ಸುಲಭವಾದ ಸಲಹೆ ಕೊಟ್ಟಿದ್ದಾರೆ. ಅವರು ಬಂದು ನೋಡಿ ಬೆಂಗಳೂರು ಸುತ್ತಲೂ ಭೂಮಿ ಬೆಲೆ ವಿಪರೀತ ಹೆಚ್ಚಾಗಿದೆ, ಸರ್ಕಾರದ ಭೂಮಿ ಇದೆ ಮಾರಿಬಿಡೋಣ. Monetization ಅಂದ್ರೆ ಏನು? ಅದನ್ನ ಮಾಡಿ ಬಿಡೋಣ. ಇಂದು ಹಷಕಾಸಿನ ಸೆಕ್ರೇಟರಿ ಹೇಳಿದ್ದಾರೆ ಅದನ್ನ Monetization ಮಾಡ್ತೀವಿ. ಇಲ್ದೇ ಇದ್ರೆ ಪ್ರೈವೇಟ್ ಪಬ್ಲಿಕ್ ಪಾರ್ಟನರ್ ಶಿಪ್ ಮೇಲೆ ರಿಯಲ್ ಎಸ್ಟೇಟ್ ನವರಿಗೆ ಪಾರ್ಟನರ್ ಶಿಪ್ ಮಾಡಿ ಕೊಡ್ತೀವಿ. ರಿಯಲ್ ಎಸ್ಟೇಟ್ ಜೊತೆಗೆ ಡೀಲ್ ಮಾಡೋದ. ಒಂದು ಕಡೆ ಸರ್ಕಾರದ ಆಸ್ತಿ ಮಾರೋದು, ಇನ್ನೊಂದು ಕಡೆ ಅದರಲ್ಲಿ ಡೀಲ್ ಮಾಡೋದು ವಾಸನೆ ಬರ್ತಾ ಇದೆ. ಸಂಪೂರ್ಣ ದಿವಾಳಿ ಆದಾಗ ಪಿತ್ರಾರ್ಜಿತ ಆಸ್ತಿಗೆ ಕೈ ಹಾಕ್ತಾರೆ. ಎಲ್ಲ ಸೋರ್ಸ ನಿಂತು ಹೋದಾಗ, ದಿವಾಳಿಯಾದಾಗ ಪಿತ್ರಾರ್ಜಿತ ಆಸ್ತಿಗೆ ಕೈ ಹಾಕಿದ್ದಾರೆ. ಅದೇ ರೀತಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡ್ತಿದ್ದಾರೆ ಎಂದರು.
ಇನ್ನೂ ಸರ್ಕಾರ ದಿವಾಳಿಯಾಗಿದ್ದು ಬಹಳ ಸ್ಪಷ್ಠವಾಗಿದೆ. ಭೂಮಿ ಮಾರೋ ಪರಿಸ್ಥಿತಿ ಬರ್ತಿರಲಿಲ್ಲ. ಬೇರೆ ದಾರಿ ಇಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವಂತಕ್ಕೆ ಡೀಲ್ ಮಾಡಿಕೊಳ್ಳುವಂತಹ ಪ್ರಯತ್ನ ಮಾಡ್ತಿರುವಂತಹದ್ದು ರಾಜ್ಯದ ಜನತೆಗೆ ಜನದ್ರೋಹ ಮಾಡ್ತಿದ್ದಾರೆ. ಸುಮಾರು 25 ಸಾವಿರ ಎಕರೆ ಗುರುತಿಸಿದ್ದಾರೆ, ಮೊದಲನೇ ಹಂತದಲ್ಲಿ 15 ಸಾವಿರ ಮಾಡ್ತೇವೆ ಅಂತಾ ಪತ್ರಿಕೆಯಲ್ಲಿ ವರದಿ ಆಗಿದೆ. ಇದು ಅಕ್ಷ್ಯಮ್ಯ ಅಪರಾಧ. ಮುಂದಿನ ಪೀಳಿಗೆ ಆಸ್ಪತ್ರೆ, ಶಾಲೆ ಕಟ್ಟಬೇಕಾದರೆ, ರಸ್ತೆ ನಿರ್ಮಾಣಕ್ಕೆ ಭೂಮಿನೇ ಇಲ್ಲ. ನಾವು ಮತ್ತೆ ಖಾಸಗಿಯವರ ಹತ್ತಿರ ಹೋಗಬೇಕು. ಅವರು ತಗೊಂಡಿದ್ದಕ್ಕೆ 10 ಪಟ್ಟು ಡಿಮ್ಯಾಂಡ್ ಮಾಡ್ತಾರೆ. 10 ಪಟ್ಟು ಬೆಲೆ ಕೊಟ್ಟು ನಮ್ಮ ಭೂಮಿ ನಾವೇ ಕೊಂಡುಕೊಳ್ಳೋ ಪರಿಸ್ಥಿತಿ ಬರ್ತಿದೆ. ಬಾಸ್ಟನ್ ಕಂಪನಿಗೆ, ಈ ದೇಶದಲ್ಲಿ ಆರ್ಥಿಕ ತಜ್ಞರು ಅವರಿಗೆ ಸಿಗಲಿಲ್ಲ. ಸಿಧ್ಧರಾಮಯ್ಯ 15 ಸಲ ಬಜೆಟ್ ಮಂಡಿಸಿದ ಆರ್ಥಿಕ ತಜ್ಞರು, ಅವರು ಚಿಂತನೆ ಮಾಡಬೇಕಿತದತು. ವಿದೇಶದಿಂದ ಎರಡು ತಿಂಗಳ ಹಿಂದೆ ನೇಮಿಸಿ ಅವರು ವರದಿ ಕೊಟ್ಟಿದ್ದಾರೆ. ಅದನ್ನ ಜಾರಿಗೆ ತರಲು ತಯಾರಾಗಿದ್ದಾರೆ. ಹಿಂದೆಂದೂ ಕಾಣದಿರುವಂತಹ ಅತ್ಯಂತ ಕೆಟ್ಟ ಆರ್ಥಿಕ ನಿರ್ವಹಣೆ ಈ ಸರ್ಕಾರ ಮಾಡ್ತಿದೆ. ಕರ್ನಾಟಕವನ್ನು 10 ವರ್ಷ ಹಿಂದೆ ತೆಗೆದುಕೊಳ್ಳೋ ಕೆಲಸ ಆಗ್ತಿದೆ. ಬಜೆಟ್ ನಲ್ಲಿ 1 ಲಕ್ಷ 5 ಸಾವಿರ ಸಾಲ ತಗೊಂಡ್ರು. ಎಲ್ದರ ಮೇಲೆ ಹೊರೆ ಮಾಡಿದ್ದಾರೆ
ನಾಲ್ಕೈದು ಸಾವಿರ ಕೋಟಿ ಪೆಟ್ರೋಲ್ ಡೀಸೆಲ್ ಮೇಲೆ ಹೆಚ್ಚಾಗಿದೆ. ಅದಲ್ಲದೇ ಭೂಮಿ ಮಾರಾಟ ಮಾಡ್ತಿದ್ದಾರೆ. ಜನ ಎಚ್ಚೆತ್ತುಕೊಳ್ಳಬೇಕು. ಮಾರಾಟ ಮಾಡದೇ ನಮ್ಮ ಆರ್ಥಿಕತೆ ಹೆಚ್ಚು ಮಾಡಬೇಕು. ವ್ಯಾಪಾರ, ವ್ಯವಹಾರ ಹೆಚ್ಚು ಮಾಡಬೇಕು. ಮುಂದಿನ ಜನಾಂಗದ ಜೇಬಿನಿಂದ ಕಳ್ಳತನ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.