ಬೆಂಗಳೂರು :- ದರ್ಶನ್ ಫಾರ್ಮ್ಹೌಸ್ ಮ್ಯಾನೇಜರ್ ಸೂಸೈಡ್ ಕೇಸ್ ಗೆ ಸಂಬಧಪಟ್ಟಂತೆ ಮೃತನ ಕುಟುಂಬಸ್ಥರು ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಸೆಂಟ್ರಲ್ ಮಿನಿಸ್ಟರ್, ದರ್ಶನ ಕೇಸ್ ಬಗ್ಗೆ ಚರ್ಚೆ ಮಾಡಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ…!
ಶ್ರೀಧರ್, ದರ್ಶನ್ರ ಫಾರಂಹೌಸ್ನಲ್ಲಿ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ. ದರ್ಶನ್ ಫಾರಂ ಹೌಸ್ನಲ್ಲಿ ಶ್ರೀಧರ್ ಕೆಲಸ ಮಾಡಿರಲಿಲ್ಲ ಎನ್ನಲಾಗಿದ್ದು, ಬದಲಿಗೆ ದುರ್ಗ ಕನ್ಸ್ಟ್ರಕ್ಷನ್ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಐದು ವರ್ಷ ರೈಟರ್ ಆಗಿ ಶ್ರೀಧರ್ ಕೆಲಸ ಮಾಡಿದ್ದ, ಅಲ್ಲಿ ವೇತನ ಕೊಡದೇ ಆತನನ್ನು ದುಡಿಸಿಕೊಂಡಿದ್ದ ಆರೋಪವಿದೆ. ದುಡಿಮೆಯ ಬಗ್ಗೆ ಪೋಷಕರು ಪ್ರಶ್ನಿಸಿದಕ್ಕೆ ಆತ್ಮಹತ್ಯೆಗೆ ಸಹ ಪ್ರಯತ್ನ ಪಟ್ಟಿದ್ದ. ವರ್ಷದ ಹಿಂದೆ ಇಲಿ ಪಾಷಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ, ಆತ ಖಿನ್ನತೆಯಲ್ಲಿಯೂ ಇದ್ದ ಎನ್ನಲಾಗುತ್ತಿದೆ.
ವೇತನ ಕೊಡದೇ ದುಡಿಸಿಕೊಂಡಿದ್ದ ದುರ್ಗ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದ ಶ್ರೀಧರ್, ಖಿನ್ನತೆಗೆ ಜಾರಿದ್ದ, ಬಳಿಕ ಮತ್ತೆ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ, ನಿವೇಶನ ನೀಡಿ ಮನೆ ಕಟ್ಟಿ ಕೊಡುವುದಾಗಿ ಕಂಪೆನಿಯವರು ಹೇಳಿದ್ದರಂತೆ. ಆದರೆ ಕಂಪನಿಯವರು ಮನೆ, ಹಣ ಯಾವುದೂ ನೀಡದೇ ಇದ್ದಿದ್ದಕ್ಕೆ ಶ್ರೀಧರ್ ಬೇಸರಗೊಂಡಿದ್ದ ಎನ್ನಲಾಗಿದೆ
ಇದೇ ಕಾರಣಕ್ಕೆ ಡೆತ್ ನೋಟ್ ಬರೆದು ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದ. ಸಾಯುವ ಮುನ್ನ ವಿಡಿಯೋ ಸಹ ಮಾಡಿದ್ದ. ಶ್ರೀಧರ್ಗೂ ದರ್ಶನ್ಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹಾಗೂ ಶ್ರೀಧರ್ ಕುಟುಂಬದವರು ಸಹ ಸ್ಪಷ್ಟನೆ ನೀಡಿದ್ದಾರೆ