ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ.
ರೇಣುಕಾಸ್ವಾಮಿ ಕೊಲೆಯನ್ನು ನಾವೇ ಮಾಡಿದ್ದೇವೆ ಎಂದು ಶರಣಾಗಿದ್ದ ಆರೋಪಿಗಳು ಹಲ್ಲೆ ಹಾಗೂ ಅಪಹರಣ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ ಎಂಬುದು ಗೊತ್ತಾಗಿದೆ. ಕೊಲೆ ಬಳಿಕ ದರ್ಶನ್ ಅಂಡ್ ಗ್ಯಾಂಗ್ ಅವರನ್ನ ಕರೆಯಿಸಿ ಹಣದ ಆಮಿಷ ಹಾಗೂ ದರ್ಶನ್ ಗಾಗಿ ಕೃತ್ಯವನ್ನ ಒಪ್ಪಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಅಥವಾ ಅಪಹರಣ ಮಾಡುವಾಗ ನಿಖಿಲ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಅವರ ಪಾತ್ರವೇ ಇರಲಿಲ್ಲ. ಅಲ್ಲದೇ ಶೆಡ್ ಒಳಗೆ ಹಾಗೂ ಒಳಗೆ ಆರೋಪಿಗಳು ಇರಲಿಲ್ಲ. ಕೊಲೆಯಾದ ಆತಂಕದಲ್ಲಿದ್ದ ದರ್ಶನ್ ಗ್ಯಾಂಗ್, ರೇಣುಕಾಸ್ವಾಮಿಯನ್ನ ಕಾರಿನಲ್ಲಿ ನಗರಕ್ಕೆ ಕರೆತಂದಿದ್ದ ಜಗದೀಶ್, ರವಿ, ಅನುಕುಮಾರ್ ನನ್ನ ಕೊಲೆ ಕೃತ್ಯವನ್ನ ಒಪ್ಪಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಇದನ್ನು ಒಪ್ಪಿಕೊಳ್ಳದೆ ಚಿತ್ರದುರ್ಗಕ್ಕೆ ತೆರಳಿದ್ದರು. ಅನಂತರ ಕಾರ್ತಿಕ್ ಅಂಡ್ ಟೀಮ್ ನನ್ನ ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡು 30 ಲಕ್ಷಕ್ಕೆ ಡೀಲ್ ಕುದುರಿಸಿ ಪುನೀತ್ ಎಂಬಾತನ ಸ್ಕಾಪಿರ್ಯೋ ಕಾರಿನಲ್ಲಿ ಶವ ಸಾಗಾಸಿ ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ಶರಣಾಗಿದ್ದರು.
ವೃದ್ಧನೊಂದಿಗೆ ಅಮಾನವೀಯವಾಗಿ ವರ್ತಿಸಿದ ಡ್ರೈವರ್ & ಕಂಡಕ್ಟರ್ ಸಸ್ಪೆಂಡ್..!
ಇನ್ನೂ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಪ್ರಕರಣದಲ್ಲಿ
17 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ ವಿಜಯನಗರ ವಹಿಸಿಕೊಂಡಿದ್ದು,ತನಿಖೆ ಬೇರೆ ಬೇರೆ ಆಯಮದಲ್ಲಿ ನಡೆಸಲಾಗಿದೆ.ತನಿಖೆಗಾಗಿ ಬೇರೆ ಬೇರೆ ತಂಡಗಳನ್ನು ನಿಯೋಜನೆ ಮಾಡಲಾಗಿದ್ದು.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹಿಂದಿನ ಇನ್ಸ್ಪೆಕ್ಟರನ್ನು ಈ ಟೀಮ್ ನಲ್ಲಿ ಸೇರಿಸಲಾಗಿದೆ.
ವಿಧಿ ವಿಜ್ಞಾನ ತಂಡ, ಟೆಕ್ನಿಕಲ್ ಟೀಮ್ ಎಲ್ಲರನ್ನು ಸೇರಿಸಿಕೊಂಡು ಕೊಲೆ ಕೇಸ್ ನ ಸಾಕ್ಷಿ ಕಲೆ ಹಾಕಲಾಗುತ್ತಿದೆ.
ಮೃತ ವ್ಯಕ್ತಿಯನ್ನು ದೌರ್ಜನ್ಯಪೂರವಾಗಿ ಕೊಲೆ ಮಾಡಲಾಗಿದ್ದು,ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೆಲಸ ಮಾಡುತ್ತಿದ್ದೇವೆ.ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ನಾವು ಮಾಡುತ್ತೇವೆ ಹಾಗೂ ಯಾವ ಒತ್ತಡಕ್ಕೂ ಮಣಿಯುದಿಲ್ಲ ಎಂದರು.
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣ ದ ಆರೋಪಿಗಳಿಗೆ ಡ್ರಿಲ್ ಮುಂದುವರೆದಿದೆ.ಆರ್ ಆರ್ ನಗರದಲ್ಲಿ ರುವ ನಟ ದರ್ಶನ್ ಮನೆಗೆ ಇಂದು ಧನರಾಜ್. ನಂದಿಶ್, ಪವನ್ ಕರೆದುಕೊಂಡು ಹೋಗಿ ಸ್ಪಾಟ್ ಮಹಜರು ಮಾಡಲಾಗಿದೆ. ಕೃತ್ಯ ನಡೆದ ಸಂದರ್ಭದಲ್ಲಿ ಆರೋಪಿಗಳು ಓಡಿಸಿದ್ದ ಮೂರು ಬೈಕ್ ಗಳನ್ನ ಸೀಜ್ ಮಾಡಿಕೊಂಡು ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಬರಲಾಗಿದೆ. ಇದ್ರಲ್ಲಿ Honda activa KA02 EL 8538
ಮರಿಯಪ್ಪ ಸಿ ಎಂಬುವವರ ಹೆಸರಿನಲ್ಲಿ,
TVs Jupiter : KA52 S0824
ರಾಮ ಕೃಷ್ಣ ಎಂಬುವವರ ಹೆಸರಿನಲ್ಲಿ ಹಾಗೂ Honda shine KA11 EL0268
ಆರೋಪಿ ನಂದೀಶ್ ಹೆಸರಿನಲ್ಲಿ ರಿಜಿಸ್ಟ್ರೇಷೆನ್ ಆಗಿರೋದು ಗೊತ್ತಾಗಿದೆ. ಹತ್ಯೆಗೂ ಮುಂಚೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ನಡೆದ ಪಾರ್ಟಿಯಲ್ಲಿ ದರ್ಶನ್ ಜೊತೆ ನಟ ಯಶಸ್ ಸೂರ್ಯ ಕೂಡ ಇದ್ರು ಅನ್ನೋ ವಿಷಯ ತಿಳಿದ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿವರೆಗೆ 27 ಜನರ ವಿಚಾರಣೆ ನಡೆಸಲಾಗಿದ್ದು, 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. 10 ಜನರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದ್ದು, ಸಂಚು, ಕಿಡ್ನಾಪ್, ಹಲ್ಲೆ , ಕೊಲೆ ಹಾಗೂ ಸಾಕ್ಷಿಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.