ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೋಟಿಕೋಟಿ ಒಡೆಯ ಆದ್ರೂ ತಮ್ಮನಿಗೆ ಸಹಕಾರ ಇಲ್ಲ. ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ ಅಂತೆ ದಾಸ. ದರ್ಶನ್ ಕರಾಳಮುಖದ ಸತ್ಯ ನಿಮ್ಮ ಮುಂದೆ
ಬಗೆದಷ್ಟು ಬಯಲಾಗುತ್ತಿದೆ ದರ್ಶನ್ ಕರಾಳಮುಖ. ದರ್ಶನ್ ಕೋಟಿ ಕೋಟಿ ಆಸ್ತಿ ಒಡೆಯ ಆಗಿದ್ರೂ ತಮ್ಮ ಇವತ್ತಿಗೂ ಬಾಡಿಗೆ ಮನೆಯಲ್ಲೇ ಇರೋದು ಗೊತ್ತಾಗಿದೆ. ಈ ಬಗ್ಗೆ ದಿನಕರ್ ಮಾತಾಡಿರೋ ವಿಡಿಯೋ ವೈರಲ್ ಆಗಿದೆ.
ಜೊತೆಗೆ ದರ್ಶನ್ ತಾಯಿ ಮೀನಾ ಮೇಲೂ ಹಲ್ಲೆ ಮಾಡಿದ್ದಾರೆ. ಇದ್ರಿಂದ ಮಗನ ಜೊತೆ ಸಂಪರ್ಕದಲ್ಲಿ ತಾಯಿ ಇಲ್ಲ ಅಂತ ಕೂಡ ಹೇಳಲಾಗುತ್ತಿದೆ. ತೂಗದೀಪ ಶ್ರೀನಿವಾಸ್ ಅವರಿಗೆ ಮಕ್ಕಳು ಸಿನಿಮಾಗೆ ಹೋಗೋದು ಇಷ್ಟ ಇರಲಿಲ್ಲವಂತೆ. ಕಾರಣ ಕಷ್ಟಪಟ್ಟು ಮಾಡಿದ ಹೆಸರು ಹಾಳು ಮಾಡುತ್ತಾರೆ ಅನ್ನೋ ಭಯ ದರ್ಶನ್ ತಂದೆಗೆ ಇತ್ತು ಅನ್ನೋ ದಿನಕರ್ ಮಾತಿನ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇನ್ನೂ ರೇಣುಕಾಸ್ವಾಮಿ ಕೊಲೆ ನಡೆದ ದಿನ ಚಿಕ್ಕಣ್ಣ ಕೂಡ ಸ್ಟೋನಿ ಬ್ರೂಕ್ ಪಬ್ ನಲ್ಲಿ ದರ್ಶನ್ ಜೊತೆ ಪಾರ್ಟಿ ಮಾಡಿದ್ದಾರೆ ಅನ್ನೋ ವಿಚಾರ ಬಯಲಾಗಿದೆ. ಇದಕ್ಕೆ ಸಂಬಂಧಪಟ್ಟಂದೆ ಚಿಕ್ಕಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇನ್ನೂ ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಕೂಡ ಮಾತಾಡಿ ದರ್ಶನ್ ಬಗ್ಗೆ ನಾನು ಏನು ಮಾತಾಡೋದಿಲ್ಲ. ಆ ಕುಟುಂಬವನ್ನ ನೋಡಿದ್ರೆ ನೋವು ಆಗುತ್ತೆ. ಆ ಕುಟುಂಬಕ್ಕೆ ನ್ಯಾಯ ಸಿಗಲಿ ಅಂತ ಹೇಳಿದ್ರು
ದರ್ಶನ್ ಹಿಂದೆ ಮುಂದೆ ಇರುತ್ತಿದ್ದ ವಿನೋದ್ ಪ್ರಭಾಕರ್, ಗರಡಿ ಸೂರಿ, ಅಭಿಷೇಕ್ ಅಂಬರೀಷ್, ಸುಮಲತಾ ಎಲ್ಲೋದ್ರು ಅನ್ನೋ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದರ ಜೊತೆಗೆ ಮೀಡಿಯಾದವರಿಗೆ ಬೈಯೋದನ್ನ ಬಿಟ್ಟು ರೇಣುಕಾಸ್ವಾಮಿ ಪತ್ನಿಗೆ ಹಣ ಸಂಗ್ರಹಿಸಿ ಸಹಾಯ ಮಾಡಿ ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೇ ಕರೆ ಕೊಟ್ಟಿದ್ದಾರೆ ಫ್ಯಾನ್ಸ್.