ಬೆಂಗಳೂರು:- ತೈಲ ದರ ಹೆಚ್ಚಳದೊಂದು ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ನಮ್ಮ ಬಾಸ್ ಜೈಲಿಂದ ಹೊರ ಬರದಿದ್ರೆ ನಾನು ಗ್ಯಾರಂಟಿ ಬದುಕಲ್ಲ – ದರ್ಶನ್ ಅಭಿಮಾನಿ ಅಳಲು!
ಟೊಮೆಟೊ ಒಂದು ಕೆಜಿಗೆ ಬರೋಬ್ಬರಿ 100 ರೂ, ಈರುಳ್ಳಿ ಬೆಲೆ ಬರೋಬ್ಬರಿ 60 ರೂ ಏರಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ಮಳೆ ಬರುತ್ತಿರುವ ಪರಿಣಾಮ ಟೊಮೆಟೊ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ಟೊಮೆಟೊ ಬೆಲೆ ಕೆಜಿಗೆ 100 ರೂ ಏರಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ.
ಈ ಕುರಿತಾಗಿ ಮಹಿಳೆಯರು ಮಾತನಾಡಿದ್ದು, ನಿನ್ನೆ ಪೆಟ್ರೋಲ್ ಮತ್ತು ಡಿಸೇಲ್ ಜಾಸ್ತಿಯಾಗಿದೆ. ಇಂದು ಟೊಮೆಟೊ, ಈರುಳ್ಳಿ ದರ ಜಾಸ್ತಿ ಆಗಿದೆ. ಹೀಗಾದ್ರೆ ಜೀವನ ಮಾಡುವುದಕ್ಕೆ ಆಗುತ್ತಾ ಎಂದಿದ್ದಾರೆ. ಕಳೆದ ವರ್ಷ ಟೊಮೆಟೊ ಬೆಲೆ 200 ರೂ. ಗಡಿ ದಾಟಿತ್ತು. ಈಗ ಮತ್ತೆ ಟೊಮಾಟೋ ಬೆಲೆ ಜಾಸ್ತಿಯಾಗುತ್ತಿದೆ. ವ್ಯಾಪಾರಸ್ಥರನ್ನ ಕೇಳಿದರೆ ಮಳೆ ಬರ್ತಿದೆ ಹೀಗಾಗಿ ಟೊಮೆಟೊ ಬರ್ತಿಲ್ಲ ಎನ್ನುತ್ತಿದ್ದಾರೆ. ಬೀನ್ಸ್, ಕ್ಯಾರೆಟ್, ಬಾಟಾಣಿ ಎಲ್ಲವೂ 100 ರೂ. ಗಡಿದಾಟಿದೆ. ಹೀಗಾದ್ರೆ ಜೀವನ ಮಾಡುವುದು ಹೇಗೆ ಹೇಳಿ. ಉಚಿತ ಯೋಜನೆ ತೆಗೆದು ಮೊದಲು ತರಕಾರಿ ಬೆಲೆ ಕಡಿಮೆ ಮಾಡಿ ಎಂದು ಗೃಹಿಣಿಯರು ಆಗ್ರಹಿಸಿದ್ದಾರೆ.