ಎಲ್ಲ ಜೀವರಾಶಿಗಳಲ್ಲಿ ಶ್ರೇಷ್ಠವಾದದ್ದು ಮಾನವ ಜನ್ಮ ಯಾರಿಗೂ ಕೆಟ್ಟದ್ದನ್ನು ಬಯಸದೆ ಎಲ್ಲರಿಗೂ ನಮ್ಮವರು ತಮ್ಮವರು ಅನ್ನುವ ಮನೋಭಾವದಿಂದ ಕಾಣುತ್ತಾ ದೇವರ ಜ್ಞಾನ ಮಾಡೋಣ ಪ್ರತಿದಿನ ನಮಾಜ್ ಮಾಡುವ ಮೂಲಕ ನಮಗೆ ಬಂದ ಕಷ್ಟವನ್ನು ದೂರಮಾಡು ಎಂದು ಅಲ್ಲಾ ಹತ್ತಿರ ಕೇಳಿಕೊಳ್ಳೋಣ.
ಎಲ್ಲರನ್ನೂ ಸಮಾನವಾಗಿ ನೋಡೋಣ ಭೂಮಿಯ ಮೇಲೆ ಇರುವ ಎಲ್ಲ ಜೀವ ರಾಶಿಗಳನ್ನು ಚೆನ್ನಾಗಿಟ್ಟು ಕಾಪಾಡು ಎಂದು ದೇವರ ಸ್ಮರಣೆ ಮಾಡೋಣ ಎಂದು ಮೋಸಿನ್ ಮೌಲಾನಾ ಗೋಕಾಕ್ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ವಿದ್ಯಾ ನಗರ ಹತ್ತಿರ ಇರುವ ಇದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಹಳ ಸರಳ ಹಾಗೂ ಶಾಂತತೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು ನಮಾಜ್ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ