ಶಿಡ್ಲಘಟ್ಟ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಬೋಗಿ ಕಾರ್ಖಾನೆ ಹಾಗೂ ಕೆಜಿಎಫ್ ತಾಲ್ಲೂಕಿನಲ್ಲಿ ಒಂದು ಬೃಹತ್ ಕೈಗಾರಿಕೆ ಸ್ಥಾಪಿಸುವುದಾಗಿ ಸಂಸದ ಮಲ್ಲೇಶ್ ಬಾಬು ತಿಳಿಸಿದರು. ತಾಲ್ಲೂಕಿನ ಮೇಲೂರು ಗ್ರಾಮದ ಶಾಸಕ ಬಿಎನ್. ರವಿಕುಮಾರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಹೆಚ್ ಡಿ. ಕುಮಾರಸ್ವಾಮಿ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ಎರಡು ಬೃಹತ್ ಕೈಗಾರಿಗಳನ್ನು ಸ್ಥಾಪಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ನಿರ್ಧರಿಸಿರುಂತೆ ಶ್ರೀನಿವಾಸಪುರದಲ್ಲಿ ರೈಲ್ವೆ ಬೋಗಿ ಕಾರ್ಖಾನೆಗೆ ಮರು ಜೀವ ಮತ್ತು ಕೆಜಿಎಫ್ ತಾಲ್ಲೂಕಿನಲ್ಲಿ ಹೊಸದಾಗಿ ಒಂದು ಬೃಹತ್ ಕಾರ್ಖಾನೆ ಸ್ಥಾಪಿಸುವುದಾಗಿ ತಿಳಿಸದರು. ನಂತರ ಮಾತನಾಡಿದ ಶಾಸಕ ರವಿಕುಮಾರ್, ಬಯಲುಸೀಮೆಗೆ ಶಾಶ್ವತ ನಿರಾವರಿ ಕೊಡಬೇಕೆಂಬುದು ಕುಮಾರಸ್ವಾಮಿಯವರ ಕನಸಾಗಿದೆ.
ಬಯಲು ಸೀಮೆಯ ಸಂಸದರು ಕುಮಾರಸ್ವಾಮಿ ಅವರೋಂದಿಗೆ ಸಹಕರಿಸಿ ಒಟ್ಟಾಗಿ ಪ್ರಧಾನಿಯವರನ್ನು ಒತ್ತಾಯಿಸಿ ಬಯಲು ಸೀಮೆಗೆ ಶಾಶ್ವತ ನಿರಾವರಿ ಯೋಜನೆಯನ್ನು ತರಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ವಕ್ಕಲ್ಲೇರಿ ರಾಮು, ಬಂಕ್ ಮುನಿಯಪ್ಪ ,ಹುಜಗೂರು ರಾಮಣ್ಣ ,ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ , ಲಕ್ಮೀ ನಾರಾಯಣ ರೆಡ್ಡಿ ,ಗಂಜಿಗುಂಟೆ ನರಸಿಂಹಮೂರ್ತಿ ,ವಿಜಯ ಭಾವರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.