ಇವತ್ತು ಜಗತ್ತಿನಲ್ಲೇಡೆ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಗುತ್ತಿದೆ
ಬದುಕಿನ ಬಂಡಿಯಲ್ಲಿ ಅಪ್ಪನ ಪಾಲು, ಸದೃಢ ಸಮಾಜದ ಪ್ರಥಮ ಅಂಗವಾದ ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿ ವಿಶ್ವ ತಂದೆಯoದಿರ ದಿನವನ್ನಾಗಿ ಆಚರಿಸುತ್ತೇವೆ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯ ಇಮ್ಮಾನುವೆಲ್ ಚರ್ಚ ನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆ ಸರಳ ಹಾಗೂ ವಿಶಿಷ್ಟವಾಗಿ ನಡೆಯಿತು,
ತಂದೆಯಂದಿರು ತಾಯಿಯಂದಿರಗಿಂತಲೂ ಹೆಚ್ಚು ಪ್ರಯಾಸ ಪಟ್ಟು ನಂಬಿದ ಜೀವಗಳಿಗೆ ತನ್ನ ಜೀವನವನ್ನೇ ಮೂಡಿಪಾಗಿಟ್ಟು ಬೆಟ್ಟದಷ್ಟು ಪ್ರೀತಿ ಮನಸಲ್ಲೇ ಬಚ್ಚಿಟ್ಟು ಬಾಹ್ಯ ಬದುಕಿಗೆ ಹೊಂದಿಕೊಂಡು ಕುಟುಂಬವನ್ನು ಕೈ ಹಿಡಿದು ನಡೆಸಿದ ದಾತ ಇವರು, ತಂದೆತಾಯಿ ಬದುಕಿರುವಾಗ್ಲೇ ಅವರನ್ನು ಕಿಂಚತ್ತು ಕೊರತೆ ಆಗದ ಹಾಗೆ ನೋಡಿಕೊಳ್ಳುವದು ನಮ್ಮ ಜವಾಬ್ದಾರಿ ಯಾಗಿದೆ ಎಂದು ಎವಂಜಿಲಿಸ್ಟ್: ಕೆ ಸುಧಾಕರ್ ಹೇಳಿದರು,
ಇವತ್ತಿನ ಸಭೆಯಲ್ಲಿ ನೆರೆದ ಪ್ರತಿಯೊಬ್ಬ ಅಪ್ಪಂದಿರಿಗೆ ಪ್ರಾರ್ಥನೆ ಮಾಡಲಾಯಿತು, ನಂತರ ಕೇಕ ಕತ್ತರಿಸುವ ಮೂಲಕ ಅವರಿಗೆಲ್ಲರಿಗೂ ಶುಭಾಶಯಗಳನ್ನು ಕೋರಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲಪ್ಪ ಚಿಕ್ಕುಡ, ರಾಮಚಂದ್ರ ಕಾಂಬಳೆ, ಶಿವು ಕಾಂಬಳೆ ಉದಯ ಉಗಾರ, ಪಾವಡೆ ಉಗಾರ,ಪತ್ರಕರ್ತ ಎಂ. ಕೆ. ಸಪ್ತಸಾಗರ, ಪ್ರಾಧ್ಯಾಪಕರು ನೂರಾರು ಜನ ಸಭೆವಿಶ್ವಾಸಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು
ವರದಿ : ಎಂ. ಕೆ. ಸಪ್ತಸಾಗರ