ಗದಗ:- ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ವಿಚಾರವಾಗಿ ಬೇರೆ ರಾಜ್ಯದ ದರಕ್ಕೆ ಸಚಿವ ಎಂ ಬಿ ಹೋಲಿಕೆಗೆ ಗದಗನಲ್ಲಿ ಜಗದೀಶ ಶೆಟ್ಟರ್ ತಿರುಗೇಟು ಕೊಟ್ಟಿದ್ದಾರೆ.
ಬೇರೇ ರಾಜ್ಯಕ್ಕೆ ಹೋಲಿಕೆ ಮಾಡಿ ನೀವು ಏರಿಕೆ ಮಾಡೋದಲ್ಲ. ಅಕ್ಕಪಕ್ಕದ ರಾಜ್ಯದಲ್ಲಿ ಕಡಿಮೆ ದರಕ್ಕೆ ಪೆಟ್ರೋಲ್, ಡೀಸೆಲ್ ಸಿಗತ್ತೆ. ಮಹಾರಾಷ್ಟ್ರ, ಗೋವಾದಲ್ಲಿ ಕಡಿಮೆ ದರಕ್ಕೆ ಸಿಗತ್ತೆ. ನೀವು ಗುಜರಾತ್ ರೆಫರ್ ಮಾಡಿದ್ರೆ ಅಲ್ಲಿ ವಸ್ತು ಸ್ಥಿತಿ ಯಾರಿಗೂ ಗೊತ್ತಿಲ್ಲ. ಸುಮ್ಮನೆ ಬೇರೆಯವರ ನೆಪ ಮಾಡಿಕೊಂಡು ಏರಿಕೆ ಮಾಡಿದ್ದು ಜನ ಸಫರ್ ಆಗ್ತಿದ್ದಾರೆ. ಈಗಾಗಲೇ ಜನ ಸಾಕಷ್ಟು ನೊಂದಿದ್ದಾರೆ ಬೆಂದಿದ್ದಾರೆ, ಜನರಿಗೆ ಇದರಿಂದ ಬಹಳಷ್ಟು ತೊಂದರೆ ಆಗತ್ತೆ
ತಕ್ಷಣವೇ ಇದನ್ನ ವಾಪಸ್ ತಗೋಬೇಕು ಅಂತಾ ಒತ್ತಾಯ ಮಾಡ್ತೇನೆ. ಒಂದು ಕಡೆ ಗ್ಯಾರಯ ಯೋಜನೆ ಫ್ರೀ ಅಂತೀರಿ, ಇನ್ನೊಂದು ಕಡೆ ವಸೂಲಿ ಮಾಡೋದು. ವಸೂಲಿ ಮಾಡಿ ಗ್ಯಾರಂಟಿ ಅನುಷ್ಠಾನ ಮಾಡಿ ಏನು ಉಪಯೋಗ ಎಂದಿದ್ದಾರೆ.