ಬೆಂಗಳೂರು: ಸಾರ್ವಜನಿಕ ಗೋಡೆಗಳಲ್ಲಿ, ಕಾಂಪೌಂಡುಗಳ ಮೇಲೆ, ಮರಗಳಲ್ಲಿ ತೋಚಿದ್ದನ್ನು ಗೀಚುವುದು ಕೆಲವರಿಗೆ ಗೀಳು. ತಮಗೆ ದ್ವೇಷವಿರುವವರ ಚಾರಿತ್ರ್ಯ ಹರಣ ಮಾಡಲು ಈ ರೀತಿ ಮಾಡುವವರೂ ಇದ್ದಾರೆ. ಈ ರೀತಿ ರಾಜ್ಯ ರಾಜಧಾನಿ ಮೆಜೆಸ್ಟಿಕ್ ನ ಶೌಚಾಲಯದ ಗೋಡೆಯಲ್ಲಿ ಮಹಿಳೆಯೊಬ್ಬರ ಫೋನ್ ನಂಬರ್ ಬರೆದು ಅವಮಾನ ಮಾಡಿದ್ದ ಆರೋಪಿಯೊಬ್ಬನಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಮಹಿಳೆಯರ ಘನತೆ ಹಾಗೂ ವ್ಯಕ್ತಿತ್ವಕ್ಕೆ ಭಂಗವನ್ನುಂಟು ಮಾಡುವ ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಾತ್ರವಲ್ಲದೆ ಈ ರೀತಿ ಮಾಡುವ ದುಷ್ಟರನ್ನು ಮಟ್ಟ ಹಾಕಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಚಿದೆ. ಸರಕಾರಿ ನೌಕರರಾಗಿರುವ ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಯನ್ನು ಮೆಜೆಸ್ಟಿಕ್ನ ಶೌಚಾಲಯದ ಗೋಡೆ ಮೇಲೆ ಬರೆದು, ಅದರಡಿ ಈಕೆ ಕಾಲ್ ಗರ್ಲ್ ಎಂದು ಹೆಸರಿಸಿದ್ದ ಆರೋಪದಡಿಯ ಪ್ರಕರಣ ರದ್ದುಪಡಿಸುವಂತೆ ಆರೋಪಿ ಕೋರಿದ್ದ ಪ್ರಕರಣದಲ್ಲಿ ಈ ಕುರಿತಂತೆ ಆದೇಶಿಸಲಾಗಿದೆ.
Father’s Day 2024: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!
ನಗರದ 5ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿ ಚಿತ್ರದುರ್ಗದ ಅಲ್ಲಾ ಬಕ್ಷ ಅಲಿಯಾಸ್ ಎ.ಬಿ. ಪಟೇಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಲೈಂಗಿಕ ಹಿಂಸೆಗಳ ಹಿನ್ನೆಲೆಯಲ್ಲಿ ಮಹಿಳೆಯರ ಖಾಸಗಿ ಹಕ್ಕಿನ ರಕ್ಷಣೆ ಇಂದಿನ ಅತ್ಯಂತ ಜರೂರಾಗಿದೆ ಎಂದು ತೀರ್ಪು ನೀಡಿದೆ.
ಮಹಿಳೆಯರ ವಿರುದ್ಧ ಬಳಸಲಾಗುವ ಅಶ್ಲೀಲ ಪದಗಳು ಹಾಗೂ ಮಾನಹಾನಿಯ ಕೃತ್ಯಗಳು ಸಂತ್ರಸ್ತರಿಗೆ ಆಘಾತವನ್ನುಂಟು ಮಾಡುತ್ತವೆ. ವೈಯಕ್ತಿಕ ಬದುಕನ್ನು ಛಿದ್ರಗೊಳಿಸಿ ಮಾನಸಿಕ ಜರ್ಜರತೆಗೆ ಕಾರಣವಾಗುತ್ತವೆ. ಹೀಗಾಗಿ, ಇಂತಹ ಅಪರಾಧಗಳಿಗೆ ಕಾರಣವಾಗುವ ದುಷ್ಟರನ್ನು ಮಟ್ಟ ಹಾಕಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.