ವಿಜಯಪುರ:- ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ವಿಚಾರವಾಗಿ ಸಚಿವ MB ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಗುಡುಗು, ಮಳೆ ನಿರೀಕ್ಷೆ..!
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಉಳಿದ ರಾಜ್ಯಗಳಿಗಿಂತ ಪೆಟ್ರೋಲ್ ಮತ್ತು ಡೀಸೆಲ್ ದರ ಕರ್ನಾಟಕದಲ್ಲಿ ಕಡಿಮೆಯೇ ಇದೆ. ತಮಿಳುನಾಡು ಹಾಗೂ ಇತರ ರಾಜ್ಯಗಳಲ್ಲಿ 5 ರಿಂದ 10 ರೂಪಾಯಿ ಹೆಚ್ಚಿಗೆ ಮಾಡಲಾಗಿದೆ. ನಾವು ಬೇರೆ ರಾಜ್ಯಗಳಿಗಿಂತ ಪೆಟ್ರೋಲ್-ಡೀಸೆಲ್ ದರವನ್ನ ಕಡಿಮೆ ಏರಿಕೆ ಮಾಡಿದ್ದೇವೆ. ರಾಜ್ಯದಲ್ಲಿ ಆದಾಯ ಕಡಿಮೆಯಾಗುತ್ತಿದೆ, ಅಭಿವೃದ್ಧಿಗೆ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಲ್ವಾ ಎಂದು ಹೇಳಿ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ
ನಾವು ಜನತೆ ಮೇಲೆ ಹೊರೆ ಹಾಕುತ್ತಿಲ್ಲ. ಇತರೆ ರಾಜ್ಯಗಳಲ್ಲಿನ ತೈಲ ಬೆಲೆಯನ್ನ ತುಲನೆ ಮಾಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದರೂ ಅವುಗಳ ಬೆಲೆ ಉಳಿದ ರಾಜ್ಯಗಳಿಗಿಂತ 3ರಿಂದ 6 ರೂಪಾಯಿ ಕಡಿಮೆಯೇ ಇದ್ದೇವೆ. ಇದರಿಂದ ಬಂದ ಆದಾಯ ರಾಜ್ಯದ ಅಭಿವೃದ್ಧಿ, ಜನರಿಗಾಗಿಯೇ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ಕೊಡುತ್ತಿದ್ದೇವೆ. ನಾವು
ಫೈನಾನ್ಶಿಯಲ್ ಮೊಬಲೈಸೇಷನ್ ಮಾಡಲೇಬೇಕು. ಪೆಟ್ರೋಲ್ ಡೀಸೆಲ್ ದರಗಳು ಬೇರೆ ರಾಜ್ಯಗಳಿಗಿಂತ ನಮ್ಮ ಹೆಚ್ಚಿಗೆ ಇದ್ದರೆ ಕೇಳಿ ಎಂದರು
ಕೇಂದ್ರ ಸರ್ಕಾರ 440 ಇದ್ದ ಎಲ್ಪಿಜಿ ಬೆಲೆಯನ್ನ 1200ಕ್ಕೆ ತೆಗೆದುಕೊಂಡು ಹೋಗಿತ್ತು, ಪೆಟ್ರೋಲ್ ಬೆಲೆ ಹೆಚ್ಚಿಸಿದ್ದರು. ಆಗ ನೀವು ಪ್ರಶ್ನೆ ಮಾಡಲಿಲ್ಲ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ 64 ಇದ್ದ ಪೆಟ್ರೋಲ್ ಅನ್ನ 100ರ ಗಡಿ ದಾಟಿಸಿದ್ದು ಬಿಜೆಪಿ ಸರ್ಕಾರ. ಅಡಿಗೆ ಎಣ್ಣೆ 58 ಇತ್ತು ಈಗ 150 ಆಗಿದೆ. ಅದನ್ನೆಲ್ಲಾ ನೀವು ಪ್ರಶ್ನೆ ಮಾಡುವುದಿಲ್ಲ. ಇದಕ್ಕೆಲ್ಲಾ ಮೋದಿ ಕಾರಣವಲ್ವಾ? ಎಂದರು.