ಪವಿತ್ರಾ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿ ಮಾಡ್ಲಿಂಗ್ ಕ್ಷೇತ್ರಕ್ಕೆ ಬಂದರು. ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡವರು ಪವಿತ್ರಾ. ಇವರು ಮೂಲತಃ ಬೆಂಗಳೂರಿನ ಜೆ ಪಿ ನಗರದವರು. ಭೂಗತ ದೊರೆ ಎಂದು ಗುರುತಿಸಿಕೊಂಡಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಸಿನಿಮಾದಲ್ಲಿ ಪವಿತ್ರಾ ನಾಯಕಿಯಾಗಿ ಕಂಗೊಳಿಸಿದ್ದರು. ಇದಾದ ಬಳಿಕ ಕೆಲವು ಸಿನಿಮಾಗಳಲ್ಲಿ ನಾಯಕಿಯಾದರು
ʼಜಗ್ಗುದಾದಾʼ ಸಿನಿಮಾ ಮೂಲಕ ದರ್ಶನ್ಗೆ ಪರಿಚಯವಾದವರು ಈ ಪವಿತ್ರಾ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ʼಜಗ್ಗುದಾದಾʼ ತೆರೆಗೆ ಬಂದ ಬೆನ್ನಲ್ಲಿಯೇ, 2017ರಲ್ಲಿ ʻತಾರಕ್ʼ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ಅತ್ಯಾಪ್ತವಾದ ಫೋಟೊವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು
ಪವಿತ್ರಾ ಕೊಲೆ ಕೇಸಿನಲ್ಲಿ ಮಿಂಗಲ್ ಆಗಿದ್ದಾಳೆ ಎಂದರೆ ನಂಲಾಗುತ್ತಿಲ್ಲ. ಪವಿತ್ರಾ ಇಲಿ ಕಂಡರೂ ಹೆದರುತ್ತಿದ್ದಳು. ಹೀಗಾಗಿ ಆಕೆ ಕೊಲೆ ಮಾಡಿದ್ದಾಳೆ ಅಂದರೆ ನಾನು ನಂಬಲ್ಲ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಜೊತೆ ಪವಿತ್ರಾ ಇದ್ದಿರಬಹುದು ಅಷ್ಟೆ. ಆಕೆ ತುಂಬ ಸಾಫ್ಟ್ʼʼ ಎಂದಿದ್ದಾರೆ.