ಚಿತ್ರದುರ್ಗ: ನಟ ದರ್ಶನ್ ಒಬ್ಬನಿಂದ ಇಡೀ ಚಿತ್ರ ರಂಗವೇ ತಲೆತಗ್ಗಿಸುವಂತೆ ಸ್ಥಿತಿನಿರ್ಮಾಣವಾಗಿದೆ ಎಂದು ಅಖಿಲ ಭಾರತ ರಾಜ್ ಕುಮಾರ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಸಾರಾ ಗೋವಿಂದ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಇದೀಗ ರೇಣುಕಾ ಸ್ವಾಮಿ ಕುಟುಂಬ ಭೇಟಿ ಮಾಡಿದ್ದೇವೆ.
ಸಿನಿಮಾ ಎಂದರೆ ಅಲ್ಲಿಕೊಡುವ ಗೌರವನೇ ಬೇರೆ ಇರುತ್ತದೆ.ಅದು ಇದ್ದ ಕಾಲವೆಂದರೆ, ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಶಂಕರ್ ನಾಗ್ ಇದ್ದಾಗ ಗೌರವವಿತ್ತು. ಇತ್ತೀಚಿನ ದಿನಗಳಲ್ಲಿ ಯುವ ನಟರು ಹಾದಿ ತಪ್ಪುತ್ತಿರುವುದು ನೋವು ತಂದಿದೆ. ರೇಣುಕಾ ಸ್ವಾಮಿ ಕುಟುಂಬವನ್ನು ಕ್ಷಮೆ ಕೇಳಿದ್ದು, ಚಲನಚಿತ್ರ ರಂಗದಿಂದ ಅರ್ಥಿಕ ನೆರವು ನೀಡುವ ನಿರ್ಧಾರ ಮಾಡಿದ್ದೇವೆ.ನಾವ್ಯಾರೂ ಕಾನೂನಿಗಿಂತ ದೊಡ್ಡವರಲ್ಲ,
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ಪೊಲೀಸ್ ಇಲಾಖೆ ಉತ್ತಮ ತನಿಖೆ ನೆಡೆಸುತ್ತಿದ್ದು, ನಮಗೆ ತೃಪ್ತಿ ಇದೆ.ರೇಣುಕಾ ಸ್ವಾಮಿ ಹತ್ಯೆ ಕೇಸ್ ನಲ್ಲಿ ಯಾರೂ ಮೂಗು ತೂರಿಸಬಾರದು ಎಂದು ಹೇಳಿದೆ. ಅದರಂತೆ ನಾನು ಚಲನ ಚಿತ್ರರಂಗದ್ಯೋಮದ ಎಲ್ಲರಿಗೂ ತೂರಿಸಬೇಡಿ ಎಂದು ಹೇಳಲು ಬಯಸುತ್ತೇವೆ. ನ್ಯಾಯಾಲಯವಿದೆ ತನಿಖೆ ಆಗುತ್ತದೆ. ಯಾರ ಮುಲಾಜಿಗೂ ಒಳಗಾಗುವುದು ಬೇಡ,ಯಾರು ಹೊಣೆಯಾಗುವುದು ಬೇಡ, ಚಲನ ಚಿತ್ರ ರಂಗ ಯಾರ ಪರ ಬಂದಿಲ್ಲ. ಆ ಕುಟುಂಬ ನೋಡಿದರೆ ಹೊಟ್ಟೆ ಉರಿಯುತ್ತದೆ ಎಂದರು.