ಹುಬ್ಬಳ್ಳಿ:ವೃತ್ತಿ ಮತ್ತು ಕಾಯಕನಿಷ್ಠೆಗೆ ಹೆಸರಾಗಿದ್ದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ಅವರು ನಮ್ಮನ್ನು ಅಗಲಿದ್ದಾರೆ. ಅವರು ನಾಡು ಕಂಡ ಶ್ರೇಷ್ಠ ಪತ್ರಕರ್ತರು. ದಿ ಹಿಂದು ಪತ್ರಿಕೆಯಲ್ಲಿ ಸುಮಾರು 47 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾನಾ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಕೆಲ ವರ್ಷಗಳಿಂದ ಶಾಸ್ತ್ರ ಅಧ್ಯಯನ ಮಾಡುತ್ತಿದ್ದ ಇವರು ಜಪ ತಪ ಮತ್ತು ಅನುಷ್ಠಾನ ನಿರತರಾಗಿದ್ದರು.
ಬಳ್ಳಾರಿ ಮೂಲವಾದರು 1958 ರಲ್ಲಿ ಹುಬ್ಬಳ್ಳಿಗೆ ಬಂದರು. ಬೆಳಗಾವಿ, ಗೋವಾ ನಂತರ ಹುಬ್ಬಳ್ಳಿಗೆ 1968ರಲ್ಲಿ ಮರಳಿ ಇಡೀ ಉತ್ತರ ಕರ್ನಾಟದ ವಿಶೇಷ ಪ್ರತಿನಿಧಿಯಾಗಿ ಸೇವೆ ಮಾಡಿದರು. 2005ರಲ್ಲಿ ನಿವೃತ್ತಿ. ಇಂಗ್ಲಿಷ್ ಭಾಷಾ ಪತ್ರಕರ್ತರಾದರೂ ಕನ್ನಡದಲ್ಲೂ ಬರೆಯುತ್ತಿದ್ದುದು ಇವರ ವಿಶೇಷತೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಅಧಿಕಾರ ವೀಕೇಂದ್ರಿಕರಣ, ಜಲಸಂಪನ್ಮೂಲ, ಪ್ರಾದೇಶಿಕ ಅಸಮಾನತೆಯ ನಿವಾರಣೆ ಮದನ ಮೋಹನ ಅವರ ಆಯ್ಕೆಯ ವಿಷಯಗಳು. ವಸ್ತುನಿಷ್ಠ ವರದಿ ಇವರ ವರದಿಗಾರಿಕೆ ಹಿರಿಮೆ. ವಿಶ್ಲೇಣಾತ್ಮಕ ಬರಹ ಕರಗತ ಮಾಡಿಕೊಂಡಿದ್ದ ಮದನಮೋಹನರು ನನ್ನಂತಹ ನೂರಾರು ಪತ್ರಕರ್ತರಿಗೆ ಗುರುಗಳು.
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ಸಚಿವರು ಆದಿಯಾಗಿ ಗಣ್ಯರು ಪತ್ರಿಕಾಗೋಷ್ಠಿಗೆ ಮದನ ಮೋಹನ ಬಂದಿದ್ದಾರೆ ಎಂದರೆ ಅಪಾರ ಗೌರವ ಜತೆಗೆ ಏನು ಪ್ರಶ್ನಿಸುವರೋ ಎಂಬ ದುಗುಡ ಮನದಲ್ಲಾಗುತ್ತಿತ್ತು. ಅಪರೂಪದ ಪ್ರಶ್ನೆಗಳೊಂದಿಗೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ನೀರಾವರಿ ಯೋಜನೆಗಳು, ಕೃಷ್ಣಾ ಜಲ ವಿವಾದದ ಬಗ್ಗೆ ಅವರ ಪಾಂಡಿತ್ಯ ಅಪಾರ.
ಪ್ರಾದೇಶಿಕ ಅಸಮಾನತೆ ಬಗ್ಗೆ ತಮ್ಮ ವರದಿ, ಲೇಖನಗಳ ಮೂಲಕ ವಸ್ರು ಸ್ಥಿತಿ ಅನಾವರಣಗೊಳಿಸಿದವರು. ಮದನ ಮೋಹನ ತಮ್ಮ ಒಡನಾಟಕ್ಕೆ ಬಂದ ಯುವ ಪತ್ರಕರ್ತರಿಗೆವತನ್ಮ ಅನುಭವಾಮೃತ ಉಣಬಡಿಸಿ ಪ್ರೋತ್ಸಾಹಿಸುತ್ತಿದ್ದರು. ವೃತ್ತಿ ವಿಚಾರದಲ್ಲಿ ಎಂದೂ ಜಾತಿ, ಮತ, ಪಂಥ ನೋಡಿದವರಲ್ಲ.
ಮದನ ಮೋಹನ ಅವರ ತಂದೆ ಮತ್ತಿಹಳ್ಳಿ ರಾಘವೇಂದ್ರರಾವ್ ದಿ ಹಿಂದು ಪತ್ರಿಕೆಯ ಬಳ್ಳಾರಿ ವರದಿಗಾರರಾಗಿದ್ದರು. ಮದನ ಮೋಹನ ಅವರ ಪುತ್ರ ಮತ್ತಿಹಳ್ಳಿ ರಾಘವ ಕೂಡ ದಿ ಹಿಂದು ಪತ್ರಿಕೆಯಲ್ಲಿ ಪತ್ರಕರ್ತ. ಮೂರು ತಲೆಮಾರು ಒಂದೇ ಪತ್ರಿಕೆಯಲ್ಲಿ ಇರುವುದು ವಿಶೇಷ.