ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಂಧನ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರವೇ ಇದರ ಹಿಂದಿನ ಸೋತ್ರದಾರಿ ಎಂದು ಕೇಂದ್ರ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕೋರ್ಟ್ ಸಹ ಸ್ಪಷ್ಟವಾಗಿ ಹೇಳಿದ್ದು ಯಡಿಯೂರಪ್ಪ ಅವರ ಬಂಧನಕ್ಕೆ ನಾನ್ ಬೇಲ್ ಬಲ್ ವಾರೆಂಟ್ ಹೊರಡಿಸುವುದು ಸಹ ತಪ್ಪು ಎಂದ ಅವರು ಇದರಲ್ಲಿ ರಾಹುಲ್ ಗಾಂಧಿ ಒತ್ತಡದ ಮೇಲೆ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು ಎಂದು ಗಂಭೀರ ಪ್ರಮಾಣದ ಆರೋಪ ಮಾಡಿದರು.
ಯಡಿಯೂರಪ್ಪ ಅವರನ್ನು ಬಂಧನ ಮಾಡಬಾರದು ಎಂಬ ಹೈಕೋರ್ಟ್ ತಕ್ಜ ಉತ್ತರ ಕೊಟ್ಟಿದೆ ಎಂದರು. ಧಾರವಾಡದಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಇದು ಕೇವಲ ಧಾರವಾಡ ಅಷ್ಟೇ ಅಲ್ಲಾ ಇತ್ತೀಚಿನ ದಿನಗಳಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ಆಗತಾ ಇವೆ. ಕರ್ನಾಟಕ ಒಂದು ರೀತಿಯಲ್ಲಿ ಇನ್ನೊಂದು ಕೋಮಿನವರಿಗೆ ಸೇಪ್ ಹ್ಯಾವನ್ ಆಗಿದೆ ಎಂದರು.
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ಧಾರವಾಡದಲ್ಲಿ ದೇಶಿಯ ಗೋವುಗಳನ್ನು ಸಾಗಿಸಿಸುವ ಸಂದ ಪೊಲೀಸರಿಗೆ ಮಾಹಿತಿ ನೀಡಿದ್ದ ಆವಾಗ ಮುಸ್ಲಿಂ ಮತಾಂತರಿಗಳಿಗೆ ಗೋಂಡಾಗಳಿಗೆ ರಕ್ಷಣೆ ಕೊಡವಾರದು ಎಂದ ಅವರು ನಾನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಅವರಲ್ಲಿ ಒತ್ತಾಯ ಮಾಡುವೆ ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದರು.
ಇನ್ನು ನಟ ದರ್ಶನನನ್ನ ಕೃಷಿ ರಾಯಭಾರಿ ಹಿಂದೆ ಮಾಡಲಾಗಿತ್ತು ಚಿತ್ರರಂಗದಲ್ಲಿನ ನಟ ನಟಿಯರನ್ನ ಸರ್ಕಾರದ ರಾಯಭಾರಿಗಳಾಗಿ ನೇಮಕ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು ಯಾರೋ ಒಬ್ಬರು ತಪ್ಪು ಮಾಡಿದರೆ ಅದನ್ನ ಇಡೀ ಚಿತ್ರರಂಗಕ್ಕೆ ಹೊಣೆ ಮಾಡುವುದು ಬೇಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಅನೇಕ ಒಳ್ಳೆಯ ನಟರು ಆಗಿ ಹೋಗಿದ್ದಾರೆ. ಇನ್ನೂ ಇದ್ದಾರೆ. ಡಾ.ರಾಜ್ ಕುಮಾರ, ಡಾ.ವಿಷ್ಣುವರ್ಧನ್ ಮೇರು ನಟರು ಇದ್ದರು ಅವರು ದೇಶಕ್ಕೆ ಮಾದರಿ ಆಗಿದ್ದಾರೆ ಎಂದರು.