ಕಾರವಾರ: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ತನಿಖೆ ಎದುರಿಸುತ್ತಿದ್ದು, ದರ್ಶನ್ ಸಹೋದರಿ ದಿವ್ಯ ಅವರ ಪತಿ ಮಂಜುನಾಥ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರನ್ನು ಪ್ರವೋಕ್ ಮಾಡಿ ಈ ಸ್ಥಿತಿಗೆ ತಂದಿದ್ದಾರೆ. ಅವರ ಗುಣ ಈ ರೀತಿಯಾಗಿಲ್ಲ. ಅವರು ಖುಷಿಯಾಗಿ ಓಡಾಡಿಕೊಂಡಿದ್ದರು.
ಅವರಿಗೆ ಕಿರಿ ಕಿರಿಯಾಗುವಂತೆ ಮಾಡಿದಾಗ ಈ ರೀತಿ ಆ್ಯಕ್ಷನ್ ತೆಗೆದುಕೊಳ್ಳುವ ಹಾಗೆ ಮಾಡಿ ಸಮಸ್ಯೆ ಆಗುತ್ತಿದೆ. ಅವರ ಒಳ್ಳೆತನ ಅವರನ್ನು ಕಾಪಾಡುತ್ತದೆ ಎಂದು ನೋವು ತೋಡಿಕೊಂಡರು.ಅವರ ಬೇಸಿಕ್ ಗುಣ ಅದಲ್ಲ. ಖುಷಿಯಾಗಿ ಜಾಲಿಯಾಗಿ ಇರುವವರು ಅವರು. ಪ್ರಾಣಿ-ಪಕ್ಷಿ ಅಂದುಕೊಂಡು ಚೆನ್ನಾಗಿದ್ದರು.
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ಕೋರ್ಟ್ ಎಲ್ಲಾ ತೀರ್ಮಾನ ಮಾಡುತ್ತೆ. ಅವರ ಲೈಫ್ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ನೋಡೋರು ಬೇರೆ ಥರ ತಿಳಿದುಕೊಂಡಿದ್ದಾರೆ. ಜನರೆಲ್ಲಾ ಶಾಂತರಾಗಿರಬೇಕು. ಒಳ್ಳೆಯ ತೀರ್ಮಾನ ಬಂದು ಸರಿ ಹೋಗುತ್ತದೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಅಭಿಮಾನಿಗಳು ಸಂತೋಷವಾಗಿರಬೇಕು. ಡಿ ಬಾಸ್ ಮತ್ತೆ ಬರುತ್ತಾರೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಖುಷಿಯಾಗಿ ಇರಬೇಕು ಎಂದರು.