ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರು ಜೈಲಿನಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಅವರು ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ಮೆಸೇಜ್ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸೋದು ಹೆಚ್ಚಿತ್ತು. ಅವರು ಗುಪ್ತಾಂಗದ ಫೋಟೋಗಳನ್ನು ಕೂಡ ಪವಿತ್ರಾಗೆ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ಪವಿತ್ರಾ ರೋಸಿ ಹೋಗಿದ್ದರು. ಈ ವಿಚಾರ ದರ್ಶನ್ ಕಿವಿಗೆ ಬಿದ್ದಿತ್ತು. ಆ ಬಳಿಕ ದರ್ಶನ್ ಸಿಟ್ಟಾದರು. ರೇಣುಕಾ ಸ್ವಾಮಿಯನ್ನು ದರ್ಶನ್ ಅವರೇ ಬೆಂಗಳೂರಿಗೆ ಕರೆಸಿದ್ದರು ಎನ್ನಲಾಗಿದೆ. ಆ ಬಳಿಕ ಅವರ ಮೇಲೆ ಹಲ್ಲೆ ನಡೆದಿದೆ. ದರ್ಶನ್ ಗ್ಯಾಂಗ್ನಿಂದಲೇ ರೇಣುಕಾ ಸ್ವಾಮಿ ಕೊಲೆಯಾಗಿದೆ.
ಈ ಘಟನೆ ಬಗ್ಗೆ ಪವಿತ್ರಾ ಗೌಡ ಜೈಲಿನಲ್ಲಿ ಮರುಗುತ್ತಿದ್ದಾರೆ. ‘ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ವಿಚಾರ ದರ್ಶನ್ಗೆ ಗೊತ್ತಾಗಬಾರದಿತ್ತು. ದರ್ಶನ್ ಕಿವಿಗೆ ಮೆಸೆಜ್ ವಿಚಾರ ಬೀಳಬಾರದಿತ್ತು. ನಾನೇ ದೂರು ನೀಡಿ ಸರಿಪಡಿಸಿಕೊಳ್ಳಬೇಕಿತ್ತು. ದರ್ಶನ್ಗೆ ವಿಚಾರ ಗೊತ್ತಾಗಿ ಇಷ್ಟೆಲ್ಲ ಅನಾಹುತ ನಡೆದುಹೋಯ್ತು’ ಎಂದು ಪವಿತ್ರಾ ಗೌಡ ಕೊರಗುತ್ತಿದ್ದಾರೆ.
ಈ ವಿಚಾರ ನನ್ನಲ್ಲೇ ಇದ್ದಿದ್ದರೆ ಈಗ ಆರಾಮಾಗಿರಬಹುದಿತ್ತು. ಕೊಲೆ ಹಂತಕ್ಕೆ ಯಾರು ಹೋಗುತ್ತಾ ಇರಲಿಲ್ಲ. ಆರೋಪಿಗಳಾಗಿ ನಾವು ಜೈಲು ಸೇರುತ್ತಿರಲಿಲ್ಲ’ ಎಂದು ಪವಿತ್ರಾ ಗೌಡ ಪಶ್ಚಾತಾಪ ಪಡುತ್ತಿದ್ದಾರೆ ಎಂದು ವರದಿ ಆಗಿದೆ.