ಬೆಂಗಳೂರು:- 13 ಜನರ ಅಟ್ಟಹಾಸಕ್ಕೆ ಆ ಒಬ್ಬ ವ್ಯಕ್ತಿ ಕೊಲೆಯಾದ. ಕಿಡ್ನಾಪ್ ಮಾಡಲು, ಕೊಲೆ ಮಾಡಿದ ನಂತರ ಶವ ಸಾಗಿಸಲು ಬಳಸಿದ ಕೆಂಪು ಬಣ್ಣದ ಜೀಪ್, ಕರಿ ಬಣ್ಣದ ಸ್ಕಾರ್ಪಿಯೋಗಳು ಸಾಕ್ಷಿ ಹೇಳ್ತಿವೆ. ದರ್ಶನ್ ಬಳಸ್ತಿದ್ದ ಜೀಪ್ ನಲ್ಲೇನಿತ್ತು? ಸ್ವಾಮಿ ಕೊಲೆ ರಹಸ್ಯದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಇನ್ ಸ್ಟಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಇನ್ನಿಲ್ಲವಾಗಿದ್ದಾನೆ. ಈ ಆರೋಪ ಹಿನ್ನೆಲೆ ನಟ ದರ್ಶನ್ ಅಂಡ್ ಟೀಂ ಅಂದರ್ ಆಗಿದ್ದಾರೆ. ಕಳೆದೆರಡು ದಿನಗಳಿಂದ ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳ ಮಹಜರು ಮಾಡ್ತಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆಗೆ ದರ್ಶನ್ ಅಂಡ್ ಅವರ ಟೀಂ ಬಳಸಿದ ನಾಲ್ಕು ವಾಹನಗಳಲ್ಲಿ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾದ ರಾತ್ರಿ ದರ್ಶನ್ ಬಳಕೆ ಮಾಡಿದ್ದ ಕೆಂಪು ಬಣ್ಣದ ಜೀಪ್ ಪಟ್ಟಣಗೆರೆ ನವೀನ್ ಶೆಡ್ ಬಳಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 9ನೇ ತಾರೀಖು ಬೆಳಗಿನ ಜಾವ 3ಗಂಟೆ 26ನಿಮಿಷಕ್ಕೆ ಎರಡು ವಾಹನಗಳು ಪಾಸ್ ಆಗಿರೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೀಜ್ ಮಾಡಿದಾಗಲೂ ಕೆಂಪು ಬಣ್ಣದ ಜೀಪ್ ನಲ್ಲಿ ಒಂದು ಮದ್ಯದ ಬಾಟಲ್ ಇದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ ನಲ್ಲಿ ಲೇಡಿಸ್ ವ್ಯಾನಿಟ್ ಬ್ಯಾಗ್ ಸಹ ಪತ್ತೆಯಾಗಿದೆ. ಆರೋಪಿ ವಿನಯ್, ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿದ್ಸ ಈ ಎರಡು ವಾಹನಗಳು ಮಾಗಡಿ ರಸ್ತೆ ಡಿಸಿಪಿ ಕಚೇರಿ ಹಿಂಬದಿ ನಿಲ್ಲಿಸಲಾಗಿದೆ.
ಸ್ಕಾರ್ಪಿಯೋದಲ್ಲಿ ರೇಣುಕಾಸ್ವಾಮಿ ದೇಹ ಸಾಗಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸಿಸಿಟಿವಿ ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ.