ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಇಂದು ದರ್ಶನ್ ಸೇರಿ ಆರೋಪಿಗಳ ಜೊತೆ ಸ್ಥಳ ಮಹಜರು ನಡೆಯಲಿದೆ.
ಮರಳು ತುಂಬಿದ್ದ ಲಾರಿ ಪಲ್ಟಿ.. ರಸ್ತೆಬದಿಯಲ್ಲಿ ವಾಸಿಸುತ್ತಿದ್ದ 8 ಮಂದಿ ಸಾವು…!
ನಿನ್ನೆ ಕೋರ್ಟ್ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ಪೊಲೀಸರು, ಎಲ್ಲರನ್ನೂ ವಿಚಾರಣೆಗಾಗಿ ಠಾಣೆಗೆ ಕರೆದಂತಿದ್ದಾರೆ. ವಿಚಾರಣೆಗೆ ಮುನ್ನ ಎಲ್ಲರಿಗೂ ದೊನ್ನೆ ಬಿರಿಯಾನಿ ಊಟ ನೀಡಿದ್ದರು. ಬಿರಿಯಾನಿ ತಿಂದು ಮುಗಿಸ್ತಿದ್ದಂತೆ ಕೊಲೆ ಕೇಸ್ನಲ್ಲಿ ದರ್ಶನ್ ಪಾತ್ರದ ವಿಚಾರಣೆ ನಡೆಸಿದರು. ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ನೇತೃತ್ವದಲ್ಲಿ ತನಿಖೆ ಚುರುಕು ಪಡೆದಿದೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಅಂದ್ರೆ ದರ್ಶನ್ ಗೆಳತಿ ಪವಿತ್ರಾ ಗೌಡ. ಹೀಗಾಗಿ ಪವಿತ್ರಾ ಗೌಡಗೂ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪವಿತ್ರಗೌಡಳನ್ನು ಶಿಫ್ಟ್ ಮಾಡಲಾಗಿದ್ದು, ಇವತ್ತು ಕಾಮಾಕ್ಷಿಪಾಳ್ಯ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಆ್ಯಂಡ್ ಟೀಂನ ವಿಚಾರಣೆ ಇಂದೂ ಮುಂದುವರಿಯಲಿದೆ. ರೇಣುಕಾಸ್ವಾಮಿ ಕರೆತರಲು ಸೂಚನೆ ಕೊಟ್ಟವರು ಯಾರು? ಹಲ್ಲೆ ಮಾಡಿದ್ದು ಯಾರು ? ಹಲ್ಲೆ ಮಾಡಲು ಬಳಸಿದ ಆಯುಧಗಳು ಯಾವುದು ಎಂದು ವಿಚಾರಣೆ ಮಾಡಲಿದ್ದಾರೆ.
ಹಲ್ಲೆ ನಡೆಸಿ ಕೊಲೆಗೈದ ಪ್ರಮುಖ ಆರೋಪಿಗಳ ಜೊತೆ ದರ್ಶನ್ ಕೂರಿಸಿ ಪೊಲೀಸರು ಮುಖಾಮುಖಿ ವಿಚಾರಣೆ ಮಾಡಲಿದ್ದಾರೆ . ನಂತರ ಸಿಡಿಆರ್ ರಿಪೋರ್ಟ್ ಫೋನ್ ಕರೆಗಳ ಮಾಹಿತಿ ಮುಂದಿಟ್ಟು ಪ್ರಶ್ನೆ ಕೇಳಲಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿ ಕೊಲೆ ಮಾಡಿದ ಸ್ಥಳ ಮಹಜರು ನಡೆಯಲಿದೆ