ಗದಗ:- ನಿರಂತರ ಮಳೆಗೆ ತೇವಗೊಂಡು ಮೇಲ್ಚಾವಣಿ ಕುಸಿದು ಮಲಗಿದ್ದ ವೃದ್ಧನ ಮೇಲೆ ಬಿದ್ದಿರುವ ಘಟನೆ ಗದಗ ನಗರದ ಖಾನತೋಟದಲ್ಲಿ ಜರುಗಿದೆ.
ಮಣ್ಣಿನ ಅಡಿಯಲ್ಲಿ ಸಿಲುಕಿದ ವೃದ್ದ ನರಳಾಟ ಅನುಭವಿಸಿದ್ದಾನೆ. ಮಣ್ಣಿನ ಅಡಿಯಲ್ಲಿ ವೃದ್ಧನಿಗೆ ಮರು ಜೀವವನ್ನು ಯುವಕರು ನೀಡಿದ್ದಾರೆ.
ರಾಮಣ್ಣ ಶಿಂಧೆ ಎಂಬ 85 ವರ್ಷದ ವೃದ್ಧ ಮಣ್ಣಿನ ಅಡಿ ಸಿಲುಕಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ. ಮಣ್ಣಿನ ಅಡಿಯಲ್ಲಿ ಸಿಲುಕಿದ ವೃದ್ಧನ ರಕ್ಷಣೆ ಮಾಡಲಾಗಿದೆ. ವೃದ್ದ ರಾಮಣ್ಣ ಶಿಂಧೆ ಹಾಗೂ ಪತ್ನಿ ರೇಣುಕಾಬಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದರು. ಗಂಡನಿಗಾಗಿ ಚಾಹ ತರಲು ಪತ್ನಿ ರೇಣುಕಾ ಬಾಯಿ ಹೊರಗಡೆ ಬಂದಿದ್ದಾರೆ.
ಮರಳಿ ಮನೆಗೆ ಹೋದವೇಳೆ ಮನೆಯ ಮೇಲ್ಛಾವಣಿ ಕುಸಿತ ಕಂಡಿದೆ. ಚಿರಾಡುತ್ತಾ ಹೊರಗಡೆ ವೃದ್ದೆ ರೇಣುಕಾ ಬಾಯಿ ಓಡಿ ಬಂದಿದ್ದಾರೆ. ತಕ್ಷಣ ಸ್ಥಳೀಯ ಯುವಕರು ಮಣ್ಣಿನ ಅಡಿಯಲ್ಲಿ ಸಿಲುಕಿ ನರಳಾಡುತ್ತಿದ್ದ ವೃದ್ದನ ರಕ್ಷಣೆ ಮಾಡಲಾಗಿದೆ. ಆಟೋ ಮೂಲಕ ವೃದ್ದನ ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.