ತಪ್ಪು ಮಾಡಿದ್ರೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲಾ, ಜೀವ ಯಾಕ್ ತಗುದ್ರಿ ಎಂದು ಹೇಳುವ ಮೂಲಕ ರೇಣುಕಾಸ್ವಾಮಿ ಕಣ್ಣೀರು ಹಾಕಿದ್ದಾರೆ.
ಕೊಲೆ ಪ್ರಕರಣ… ಜಡ್ಜ್ ಮುಂದೆ ಗಳಗಳನೆ ಕಣ್ಣೀರಿಟ್ಟ ನಟ ದರ್ಶನ್.. ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ!
ಈ ಬಗ್ಗೆ ಮಾತನಾಡಿದ ಅವರು, ನನ್ನ ಪತಿ ಹತ್ಯೆಯಾಗಿದೆ. ನಾನು ಗರ್ಭಿಣಿ ಇದ್ದೇನೆ. ನಾವಿಬ್ಬರು ಮದುವೆಯಾಗಿ ಒಂದು ವರ್ಷ ಆಗಿತ್ತು. ನನ್ನ ಗಂಡನಿಗೆ ಹೀಗೆ ಆಗಬಾರದಿತ್ತು.
ನಾನು ತಾಯಿ ಆಗುತ್ತಿದ್ದೇನೆ, ಗಂಡನಿಲ್ಲದೆ ಹೇಗಿರಲಿ, ನನ್ನ ಮತ್ತು ಮಗುವಿನ ಭವಿಷ್ಯವೇನು. ನನಗೆ ನ್ಯಾಯ ಕೊಡಿಸಬೇಕೆಂದು ಕಣ್ಣೀರುಟ್ಟು ಮನವಿ ಮಾಡಿದರು.
ರೇಣುಕಾಸ್ವಾಮಿ ಇಲ್ಲಿಂದ ಹೋಗುವಾಗ ನಮಗೆ ಏನೂ ಹೇಳಿ ಹೋಗಿಲ್ಲ. ಅಂದು ಮದ್ಯಾಹ್ನ ಫೋನ್ ಮಾಡಿದ್ರು, ನಮ್ಮತ್ತೆಗೆ ಊಟಕ್ಕೆ ಬರ್ತಿನಿ ಅಂತಾ ಹೇಳಿದ್ದರು, ಆದರೆ ಬರಲೇ ಇಲ್ಲ. ನನ್ನ ಪತಿ ದರ್ಶನ್ ಅಭಿಮಾನಿ ಆಗಿರಲಿಲ್ಲ. ನನ್ನ ಗಂಡ ಏನಾದರೂ ತಪ್ಪು ಮಾಡಿದ್ದರೆ, ವಾರ್ನಿಂಗ್ ಕೊಟ್ಟು ಕಳಿಹಿಸಬೇಕಿತ್ತು. ಅವರ ಜೀವಕ್ಕೆ ಯಾಕೆ ತೊಂದರೆ ಮಾಡಬೇಕಿತ್ತು. ಗಂಡನನ್ನು ಕಳೆದುಕೊಂಡು, ನನ್ನ ಮತ್ತು ನನ್ನ ಮಗುವಿನ ಮುಂದಿನ ಭವಿಷ್ಯವೇನು ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ
ಇನ್ನೂ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಎಂಬಾತನನ್ನ ಚಿತ್ರಹಿಂಸೆ ಮಾಡಿ ಹತ್ಯೆಯಾಗಿದೆ ಎಂಬ ಆರೋಪದಲ್ಲಿ ದರ್ಶನ್ (Darshan), ಸ್ನೇಹಿತರು ಹಾಗೂ ಅವರ ಅಭಿಮಾನಿಗಳನ್ನ ಬೆಂಗಳೂರು ಪೊಲೀಸರು (Bengaluru Police) ಬಂಧಿಸಿದ್ದಾರೆ. ಚಿತ್ರದುರ್ಗದಿಂದ (Chitradurga) ತನ್ನ ಅಭಿಮಾನಿಯೊಬ್ಬನಿಂದ ಬೆಂಗಳೂರಿಗೆ ಕರೆಸಿಕೊಂಡು ಕಾಮಾಕ್ಷಿಪಾಳ್ಯದ (Kamakshipalya) ತನ್ನ ಸ್ನೇಹಿತ ಗೋಡೌನ್ನ ಶೇಡ್ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿಯನ್ನ ಮನಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆತನ ಮೃತದೇಹವನ್ನು ಮೋರಿಗೆ ಬಿಸಾಡಲಾಗಿತ್ತು. ಇದೀಗ ಹತ್ಯೆ ಪ್ರಕರಣದಲ್ಲಿ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿ 13 ಜನರನ್ನ ಬಂಧಿಸಲಾಗಿದೆ.