ಪಾಟ್ನಾ:- ಒಡಿಶಾದಲ್ಲಿ ಕೇಸರಿ ಪಕ್ಷಕ್ಕೆ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ. ಸಿಎಂ ಅಧಿಕೃತ ನಿವಾಸಕ್ಕಾಗಿ ಬಿಜೆಪಿ ಹುಡುಕಾಟ ಮುಂದುವರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ನವೀನ್ ಪಟ್ನಾಯಕ್ ತಮ್ಮ ಮನೆಯನ್ನೇ ಸಿಎಂ ಕಚೇರಿಯನ್ನಾಗಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಹೊಸ ಮನೆ ಹುಡುಕುವಂತಾಗಿದೆ.
ಕುಮಾರಸ್ವಾಮಿ ಮಂಡ್ಯ ಬಿಟ್ಟರೂ ಚನ್ನಪಟ್ಟಣ ಬಿಟ್ಟು ಕೊಡಲ್ಲ -ಡಿಕೆ ಸುರೇಶ್
2000 ರ ಚುನಾವಣೆಯಲ್ಲಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಬಳಿಕ ಸರ್ಕಾರ ಮಂಜೂರು ಮಾಡಿದ ಸಿಎಂ ನಿವಾಸಕ್ಕೆ ತೆರಳುವ ಬದಲು ಮನೆಯಿಂದಲೇ ಕೆಲಸ ಮಾಡಲು ಮುಂದಾದರು. ಪಟ್ನಾಯಕ್ ಅವರ ಈ ನಿರ್ಧಾರವನ್ನು ಆಗ ಹೆಚ್ಚು ಪ್ರಶಂಸೆಗೆ ಒಳಗಾಗಿತ್ತು. ಅಂದಿನಿಂದ 2024ರ ವಿಧಾನಸಭಾ ಚುನಾವಣೆಯವರೆಗೂ ತಮ್ಮ ಸ್ವಂತ ಮನೆಯಿಂದಲೇ ಕರ್ತವ್ಯ ನಿರ್ವಹಿಸಿದ್ದರು. ಇತರೆ ಆಡಳಿತ ವಿಭಾಗಗಳೂ ಇಲ್ಲಿಂದಲೇ ಕೆಲಸ ಮಾಡುತ್ತಿದ್ದವು. ಈ ನವೀನ್ ನಿವಾಸ್ ಮನೆಯನ್ನ ಅವರ ತಂದೆ ದಿವಂಗತ ನಾಯಕ ಬಿಜು ಪಟ್ನಾಯಕ್ ನಿರ್ಮಿಸಿದ್ದರು.
ನವೀನ್ ಪಟ್ನಾಯಕ್ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರು ನವೀನ್ ನಿವಾಸ್ ಎಂಬ ಭವ್ಯ ಭವನವನ್ನು ನಿರ್ಮಿಸಿದ್ದರು. ನವೀನ್ ಪಟ್ನಾಯಕ್ ಕಳೆದ 24 ವರ್ಷಗಳಿಂದ ಈ ಭವನದಿಂದಲೇ ರಾಜ್ಯವನ್ನು ಆಳುತ್ತಿದ್ದರು. ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಮಾಡುವ ಒಂದು ತಿಂಗಳ ಮೊದಲು ಅವರು ಚುನಾವಣೆಯಲ್ಲಿ ಬಿಜೆಪಿಗೆ ಸೋತಿದ್ದರು.
ಒಡಿಶಾದ ವಿವಾದರಹಿತ ನಾಯಕ ನವೀನ್ ಪಟ್ನಾಯಕ್ 24 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿಯನ್ನು ಬಿಜೆಪಿ ಸೋಲಿಸಿತ್ತು. ರಾಜ್ಯದಲ್ಲಿ ಚೊಚ್ಚಲ ಬಾರಿಗೆ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ಬಿಜೆಪಿ ಜೂನ್ 12ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಕೂಡ ಭಾಗವಹಿಸಲಿದ್ದಾರೆ.