ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಪೊಲೀಸರು ಬಂಧನ್ಕಕೊಳಪಡಿಸಿದ್ದಾರೆ. ದರ್ಶನ್ ಸಮ್ಮುಖದಲ್ಲಿಯೇ ಕೊಲೆ ನಡೆದಿದೆ ಎನ್ನುವುದು ಒಂದು ವಾದವಾದರೆ, ಸ್ವತಃ ದರ್ಶನ್ ಅವರೇ ಹಲ್ಲೆ ನಡೆಸಿ ಈ ಹತ್ಯೆಯನ್ನು ಮಾಡಿದ್ದಾರೆಂಬ ಊಹಾಪೋಹವೂ ಕೇಳಿಬರುತ್ತಿದೆ. ಎಲ್ಲಾ ವಿಚಾರಗಳೂ ಪೊಲೀಸ್ ತನಿಖೆಯ ಬಳಿಕ ಬಯಲಾಗಲಿದೆಯಾದರೂ, ನಟ ದರ್ಶನ್ ಬಗ್ಗೆ ತಿಳಿದವರಿಗೆ ಇದು ಆಶ್ಚರ್ಯಕರ ಸುದ್ದಿಯೇ ಅಲ್ಲ.
ಈ ಹಿಂದೆಯೂ ಸಹ ಹತ್ತು ಹಲವು ಪ್ರಕರಣಗಳಲ್ಲಿ ದರ್ಶನ್ ಹೆಸರು ಕೆಡಿಸಿಕೊಂಡಿದ್ದರು. ಹೆಂಡತಿಯನ್ನು ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದ ಆರೋಪದಿಂದ ಹಿಡಿದು, ಹೊಟೇಲ್ ಸಪ್ಲೈಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದವರೆಗೂ ದರ್ಶನ್ ಕುಖ್ಯಾತಿ ಪಡೆದಿದ್ದಾರೆ. ದರ್ಶನ್ ಮೇಲಿರುವ ಪ್ರಕರಣಗಳ ಸಣ್ಣ ಝಲಕ್ ಇಲ್ಲಿದೆ.
2011 ರಲ್ಲಿ ದರ್ಶನ್ ವಿರುದ್ದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬಯಲಾಗಿತ್ತು. ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದಿದ್ದರೆಂದು ಪತ್ನಿ ದೂರಿದ್ದರು. ನಟಿ ನಿಖಿತಾ ತುಕ್ರಾಲ್ ವಿಷಯದಲ್ಲಿ ಕಿರಿಕ್ ಶುರುವಾಗಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿತ್ತು. ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ದರ್ಶನ್ 28 ದಿನ ಜೈಲುವಾಸವನ್ನೂ ಅನುಭವಿಸಿದ್ದರು. ಹಿರಿಯ ನಟ ಅಂಬರೀಶ್ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದು ಪ್ರಕರಣ ಸುಖಾಂತ್ಯ ಕಂಡಿತ್ತು.
2021 ಪ್ರಿನ್ಸ್ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ವಿವಾದಕ್ಕಡೆ ಮಾಡಿಕೊಟ್ಟಿತ್ತು. ಮದ್ಯದ ಅಮಲಿನಲ್ಲಿ ಊಟ ನಿಧಾನವಾಗಿ ತಂದಿದ್ದಕ್ಕೆ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿ ಸಪ್ಲೈಯರ್ ಕಣ್ಣಿಗೆ ಭಾರೀ ಪೆಟ್ಟಾಗಿದೆಯೆನ್ನಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ ರನ್ನು ರಕ್ಷಿಸಲಾಗಿದೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು.
Ginger Side Effects: ಅತಿಯಾದ ಶುಂಠಿ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತೆ ಗೊತ್ತಾ..?
ನಟ ಸುದೀಪ್ ಹಾಗೂ ನಟ ದರ್ಶನ್ ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಅದೊಂದು ದಿನ ಇದ್ದಕ್ಕಿದಂತೆ “ನಾನು ಹಾಗೂ ಸುದೀಪ್ ಸ್ನೇಹಿತರಲ್ಲ, ನಾವು ಕೇವಲ ಕನ್ನಡ ಚಿತ್ರರಂಗದ ನಟರಷ್ಟೆ. ಯಾವುದೇ ಉಹಾಪೋಹಗಳು ಬೇಡ. ಎಲ್ಲಾ ಮುಗೀತು” ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಆ ಮೂಲಕ ಕಿಚ್ಚನ ಜೊತೆಗಿನ ಸ್ನೇಹಕ್ಕೆ ಎಳ್ಳು ನೀರು ಬಿಟ್ಟರು. ಆ ಬಳಿಕ ಎಂದೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಸಂದರ್ಶನವೊಂದರಲ್ಲಿ ದರ್ಶನ್ಗೆ ‘ಮೆಜೆಸ್ಟಿಕ್’ ಸಿನಿಮಾ ಅವಕಾಶ ಕೊಡಿಸಿದ್ದು ನಾನೇ. ಆ ಚಿತ್ರವನ್ನ ನಾನೇ ಮಾಡಬೇಕಿತ್ತು. ಆದರೆ ನನ್ನ ಡೇಟ್ಸ್ ಇಲ್ಲದ ಕಾರಣಕ್ಕೆ ಆ ಅವಕಾಶವನ್ನ ದರ್ಶನ್ಗೆ ಕೊಡಿಸಿದೆ ಎಂದು ಸುದೀಪ್ ಹೇಳಿದ್ದರು. ಇದರ ಬಗ್ಗೆ ಸುದೀಪ್ ಕ್ಲಾರಿಟಿ ಕೊಡಲಿ ಎಂದು ದರ್ಶನ್ ಆಗ್ರಹಿಸಿದ್ದರು.
ನಟ ದರ್ಶನ್ ಹುಟ್ಟುಹಬ್ಬದಂದು ಮನೆಗೆ ಶೂಟಿಂಗ್ ಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ, 2012 ರಲ್ಲಿ ಚಿಂಗಾರಿ ನಿರ್ಮಾಕರ ಮಹದೇವ್ ಅವರಿಗೆ ಹಲ್ಲೆ ಬೆದರಿಕೆ ಅವಾಚ್ಯ ಶಬ್ದಗಳಿಂದ ನಿಂದನೆ, ಯಜಮಾನ ಸಿನಿಮಾ ಚಿತ್ರೀಕರಣದ ವೇಳೆ ಜ್ಯೂ. ಆರ್ಟಿಸ್ಟ್ ಶಿವಶಂಕರ್ ಮೇಲೆ ಹಲ್ಲೆ ಮುಂತಾದವು ದರ್ಶನ್ ಗೆ ಸಾಕಷ್ಟು ಕುಖ್ಯಾತಿ ನೀಡಿತು. ಇವಿಷ್ಟೇ ಅಲ್ಲದೇ ನಿರ್ಮಾಪಕ ಉಮಾಪತಿ ಜೊತೆಗಿನ ವಿವಾದ,
‘ಸುಲ್ತಾನ್’ ಸಿನಿಮಾ ವಿಚಾರವಾಗಿ ನಟ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಸಹೋದರ ದಿನಕರ್ ನಡುವೆ ಸಣ್ಣ ಜಗಳವಾಗಿತ್ತು. ತಮಿಳಿನ ‘ಪೂಜೈ’ ಸಿನಿಮಾ ರೈಟ್ಸ್ ತಂದು ದರ್ಶನ್ ಜೊತೆ ಸಿನಿಮಾ ಮಾಡಲು ಬುಲೆಟ್ ಪ್ರಕಾಶ್ ಮುಂದಾಗಿದ್ದರು. ಆದರೆ ಸಿನಿಮಾ ಪ್ರಮೋಷನ್ ವಿಚಾರದಲ್ಲಿ ದಿನಕರ್ ಹಾಗೂ ಬುಲೆಟ್ ನಡುವೆ ಕಿರಿಕ್ ಆಗಿ ದಿನಕರ್ ವಿರುದ್ಧ್ ಬುಲೆಟ್ ಪ್ರಕಾಶ್ ದೂರು ದಾಖಲಿಸಿದ್ದರು. ಈ ವಿವಾದದಲ್ಲಿ ನೇರವಾಗಿ ದರ್ಶನ್ ಹೆಸರು ಬರದೇ ಇದ್ದರೂ ಭಾರೀ ಸುದ್ದಿ ಆಗಿದ್ದಂತೂ ಸುಳ್ಳಲ್ಲ.
ಮನೆಗೆ ಬಂದಿದ್ದ ಮಾಧ್ಯಮದವರ ಮೇಲೆ ಹಲ್ಲೆ, ನಟ ಜಗ್ಗೇಶ್ ಜೊತೆಗೆ ದರ್ಶನ್ ಅಭಿಮಾನಿಗಳ ವಿವಾದ, ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪ, ಪತ್ನಿಯೊಂದಿಗೆ ಹಾಗೂ ಇತರೆ ನಟಿಯರೊಂದಿಗೆ ಫೋನ್ ನಲ್ಲಿ ನಡೆಸಿದ್ದ ಅಶ್ಲೀಲ್ ಸಂಭಾಷಣೆಗಳ ರೆಕಾರ್ಡ್ ಬಹಿರಂಗ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆಗಿನ ವಿವಾದ, ನಿರ್ದೇಶಕ ಪ್ರೇಂ ಬಗ್ಗೆ ಅವಹೇಳನಕಾರಿ ಹೇಳಿಕೆ ಮುಂತಾದವು ದರ್ಶನ್ ಹಿಂದಿರುವ ವಿವಾದಗಳ ಪೈಕಿ ಕೆಲವು.