ಯುವ ರಾಜ್ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣ ಏನು ಎಂದು ಲಾಯರ್ ಹೇಳಿದ್ದು, ಶ್ರೀದೇವಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಶ್ರೀದೇವಿಗೆ ಬಾಯ್ಫ್ರೆಂಡ್ ಇದ್ದಾನೆ ಎಂದು ಲಾಯರ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಶ್ರೀದೇವಿ ಕುಟುಂಬಕ್ಕೆ ಕೋಟಿ ಕೋಟಿ ವಂಚಿಸಿದ್ದಾರಂತೆ. ಅಣ್ಣಾವ್ರ ಫ್ಯಾಮಿಲಿ ಹೆಸರು ಕೆಡಿಸೋದಾಗಿ ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದಾರೆ ಎಂದು ಲಾಯರ್ ಹೇಳಿದ್ದಾರೆ.
Bengaluru: ಮೆಟ್ರೋ ಟ್ರ್ಯಾಕ್ ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ..!
ರಾಜ್ ಕುಮಾರ್ ಅಕಾಡೆಮಿಯಿಂದ 3 ಕೋಟಿಗೂ ಅಧಿಕ ಹಣವನ್ನು ಶ್ರೀದೇವಿ ಅಕಾಡೆಮಿಯಿಂದ ಆಕೆಯ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆಕೆ ಇದು ಯಾರಿಗೂ ಗೊತ್ತಿರ್ಲಿಲ್ಲ. ಗೌಪ್ಯವಾಗಿ ಈ ವ್ಯವಹಾರ ನಡೆಸಿದ್ದಾರೆ ಎಂದು ಲಾಯರ್ ಹೇಳಿದ್ರು.
ಶ್ರೀದೇವಿ, ರಾಜ್ ಕುಮಾರ್ ಕುಟುಂಬದ ಹೆಸರು ಕೆಡಿಸ್ತೀನಿ ಅಂತ ಬೆದರಿಕೆ ಹಾಕುತ್ತಿದ್ದರಂತೆ. ಅಕಾಡೆಮಿ ಹಣ ಲಪಟಾಯಿಸಿ ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರಂತೆ. ಸುಳ್ಳು ಹೇಳಿ ಯುಎಸ್ ಗೆ ಹೋಗಿರುವ ಶ್ರೀದೇವಿ ಅಲ್ಲಿಯೇ ಮಾಸ್ಟರ್ಸ್ ಕೂಡ ಮಾಡ್ತಿದ್ದಾರೆ. ರಾಜ್ ಕುಟುಂಬ ಹಣದಿಂದ ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಸೈಟ್ ಖರೀದಿಸಿದ್ದಾರಂತೆ. ಇವೆಲ್ಲವೂ ಅಕಾಡೆಮಿಯಿಂದ ಕಾನೂನು ಬಾಹಿರವಾಗಿ ವರ್ಗಾಯಿಸಿಕೊಂಡ ಹಣದಿಂದ ಮಾಡಿದ್ದಾರೆ ಎನ್ನಲಾಗ್ತಿದೆ.
ಯುಎಸ್ ಗೆ ಹೋಗುವ ಮೊದಲೇ ನಾನು ನಿನ್ನ ಜೊತೆ ಇರಲು ಆಗಲ್ಲ ಎಂದು ಶ್ರೀದೇವಿ ಹೇಳಿದ್ರು. ನಾನು ಫಾರಿನ್ ಬಿಟ್ಟು ಬರಲ್ಲ ಎನ್ನುತ್ತಿದ್ದ ಶ್ರೀದೇವಿ, ನಾನು ನನ್ನ ಬಾಯ್ ಫ್ರೆಂಡ್ ರಾಧೆಯ್ಯನಿಂದ ಸ್ಪರ್ಮ್ ಡೊನೇಟ್ ಮಾಡಿಸಿಕೊಂಡು ಮಕ್ಕಳು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು ಎಂದು ಲಾಯರ್ ಹೇಳಿದ್ರು.
ನಾನು ಯುಎಸ್ ನಲ್ಲೇ ಇರ್ತೇನೆ ನೀನು ಅಲ್ಲೇ ಬೆಂಗಳೂರಲ್ಲಿ ಇರು ಅಂತ ಶ್ರೀದೇವಿ, ಯುವನಿಗೆ ಮಾನಸಿಕ ಹಿಂಸೆ ಕೊಟ್ಟಿದ್ದಾರಂತೆ. ಒಂದು ತಿಂಗಳ ಹಿಂದೆ ರಾಧೆಯ್ಯನಿಗೆ ಮದುವೆ ಆಗಿದೆ. ಆ ಸಮಯದಲ್ಲಿ ಆಕೆ ಬಹಳ ಡಿಪ್ರೆಷನ್ ಗೆ ಹೋಗಿದ್ದಳು. ಇದಕ್ಕೆ ಈಗ ಯುವನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಅಕಾಡೆಮಿಯ ಪ್ರಾಪರ್ಟಿಯನ್ನು ಶ್ರೀದೇವಿ ತನ್ನ ತಂಗಿಯ ಹೆಸರಿಗೆ ಮಾರ್ಟಿಗೇಜ್ ಮಾಡಿ ಲೋನ್ ತಗೊಂಡಿದ್ದಾರೆ ಎಂದಿದ್ದಾರೆ.