ವಿಚ್ಛೇದನ ಅರ್ಜಿಲ್ಲಿ ಯುವ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾರೆಂದು, ಆತನ ಸ್ಪರ್ಮ್ ಬಳಸಿ ಮಗು ಪಡೆಯುವೆ ಎಂದು ಯುವನಿಗೆ ನಿರಂತರವಾಗಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಪೆಟಿಷನ್ ದಾಖಲಿಸಿದ್ದೇವೆ ಎಂದು ಯುವ ಪರ ವಕೀಲ ಸಿರಿಲ್ ಪ್ರಸಾದ್ ತಿಳಿಸಿದ್ದಾರೆ.
ಇಂದು ಯುವ ಕಡೆಯಿಂದ ನೋಟಿಸ್ ಇಶ್ಯೂ ಆಗಿದೆ. ನಾವು ಹಿಂದೂ ಮ್ಯಾರೇಜ್ ಆ್ಯಕ್ಟ್ ಪ್ರಕಾರ ಡಿವೋರ್ಸ್ ಕೇಳಿದ್ದೇವೆ. 2 ವರ್ಷಗಳಿಂದ ಅವರ ನಡುವೆ ಸಂಬಂಧ ಹಳಸಿದೆ. ಯುವನ ಪತ್ನಿ ಇಡೀ ಕುಟುಂಬದ ವ್ಯವಹಾರ ಹಾಗೂ ಎಲ್ಲರದ ಮೇಲೂ ಕಂಟ್ರೋಲ್ ಮಾಡುವುದಕ್ಕೆ ನೋಡುತ್ತಿದ್ದರು. ಯುವ ಕುಟುಂಬದಿಂದ ಸಾಕಷ್ಟು ಹಣ ಖರ್ಚು ಮಾಡಿಸಿದ್ದಾರೆ ಎಂದು ಪೆಟಿಷನ್ನಲ್ಲಿ ಸೇರಿಸಿದ್ದೇವೆ.
ಶ್ರೀದೇವಿ ಐಎಎಸ್ ತರಬೇತಿಗೆಂದು ದೆಹಲಿಗೆ ಹೋಗಿದ್ದರು. ಈ ವೇಳೆ ಆಕೆ ಯುವಕನೊಬ್ಬನ ಜೊತೆ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ರಾತ್ರಿ ಅವನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಇಂಥಹ ಹಲವು ಕಾರಣಗಳನ್ನು ಪೆಟಿಷನ್ ನಲ್ಲಿ ಫೈಲ್ ಮಾಡಿದ್ದೇವೆ ಎಂದು ವಕೀಲ ಸಿರಿಸ್ ಪ್ರಸಾದ್ ತಿಳಿಸಿದ್ದಾರೆ.
ಯುಎಸ್ಗೆ ಹೋಗುವ ಮೊದಲೇ ಆಕೆ ನಾನು ಇಲ್ಲಿ ಇರೋಕ್ಕಾಗಲ್ಲ ಎಂದು ಯುವನಿಗೆ ಹೇಳುತ್ತಿದ್ದರು. ಇದಕ್ಕೆ ನಾನು ಇಲ್ಲಿದ್ದುಕೊಂಡು ಸಿನಿಮಾ ಮಾಡಬೇಕು ಎಂದು ನನ್ನ ಕ್ಲೈಂಟ್ ಹೇಳಿದ್ದಾರೆ. ಅದಕ್ಕೆ ಆಕೆ ನಾನು ನನ್ನ ಬಾಯ್ ಫ್ರೆಂಡ್ ಸ್ಪೆರ್ಮ್ ಡೊನೇಟ್ ಮಾಡಿಸಿಕೊಂಡು ಮಕ್ಕಳು ಮಾಡಿಕೊಳ್ಳುತ್ತೇನೆ. ನಾನು ಯುಎಸ್ ನಲ್ಲೇ ಇರುತ್ತೇನೆ. ನೀನು ಅಲ್ಲೇ ಬೆಂಗಳೂರಲ್ಲಿ ಇರು ಅಂತ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಒಂದು ತಿಂಗಳ ಹಿಂದೆ ಆಕೆ ಬಾಯ್ಫ್ರೆಂಡ್ಗೆ ಮದುವೆ ಆಗಿದೆ. ಆ ಸಮಯದಲ್ಲಿ ಆಕೆ ಬಹಳ ಡಿಪ್ರೆಷನ್ ಗೆ ಹೋಗಿದ್ದರು. ಇದಕ್ಕೆ ಈಗ ಯುವನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಯುವ ಪರ ವಕೀಲ ತಿಳಿಸಿದ್ದಾರೆ.
ಯುವನ ಪತ್ನಿ ಸುಳ್ಳು ಹೇಳಿ ಯುಎಸ್ಗೆ ಹೋಗಿ ಅಲ್ಲಿ ಮಾಸ್ಟರ್ಸ್ ಮಾಡ್ತಿದ್ದಾರೆ. ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಬೆಂಗಳೂರಲ್ಲಿ ಸುಮಾರು 20ಕ್ಕೂ ಅಧಿಕ ಸೈಟ್ ಖರೀದಿ ಮಾಡಿದ್ದಾರೆ. ಇದೆಲ್ಲಾ ಯುವ ಕುಟುಂಬದ ಹಣದಿಂದಲೇ ಖರೀದಿ ಮಾಡಿದ್ದಾರೆ. ಅಕಾಡೆಮಿಯಿಂದ ಕಾನೂನು ಬಾಹಿರವಾಗಿ ವರ್ಗಾಯಿಸಿಕೊಂಡ ಹಣದಿಂದ ಇಷ್ಟೆಲ್ಲಾ ಆಸ್ತಿ ಖರೀದಿ ಮಾಡಿದ್ದಾರೆ. ಅಕಾಡೆಮಿಯ ಪ್ರಾಪರ್ಟಿಯನ್ನು ಶ್ರೀದೇವಿ ತನ್ನ ತಂಗಿಯ ಹೆಸರಿಗೆ ಮಾರ್ಟಿಗೇಜ್ ಮಾಡಿ ಲೋನ್ ತಗೊಂಡಿದ್ದಾರೆ. ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ನಿಂದಲೂ ಗೌಪ್ಯವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.