ಬೆಂಗಳೂರು:– ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟವಾಗಿದ್ದು, 8 ಜಿಲ್ಲೆಗಳಲ್ಲಿ 13 ಕೋಟಿಯಷ್ಟು ಹಾನಿಯಾಗಿದೆ.
ಇಂದು ಪ್ರಧಾನಿಯಾಗಿ ಪ್ರಮಾಣ ವಂಚನ ಸ್ವೀಕಾರ..ಬೆಳಿಗ್ಗೆಯೇ ಗಾಂಧೀಜಿ, ಅಟಲ್ ಸ್ಮಾರಕಕ್ಕೆ ನಮಿಸಿದ ನರೇಂದ್ರ ಮೋದಿ!
ಗಾಳಿ ಮಳೆಯಿಂದಾಗಿ ಸಾಕಷ್ಟು ಅವಾಂತರವಾಗಿದ್ದು ಹಲವೆಡೆ ವಿದ್ಯುತ್ ಕಂಬಗಳಿಗೆ, ಟ್ರಾನ್ಸ್ಪಾರ್ಮರ್ ಗೆ ಹಾನಿಯಾಗಿದೆ. ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಗಾಳಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಬಿರುಗಾಳಿ ಸಹಿತ ಗಾಳಿ ಮಳೆಗೆ ಹಲವೆಡೆ ಕಂಬಗಳ ಮೇಲೆ ಮರಗಳು ಬಿದ್ದು ಕಂಬ ಮುರಿದಿದ್ರೆ. ಇನ್ನೂ ಕೆಲವೆಡೆ ಸಿಡಿಲಿಗೆ, ವಿದ್ಯುತ್ ಟ್ರಾನ್ಸ್ಫಾರ್ಮರ್ ಗೆ ಹಾನಿಯಾಗಿದೆ. ಮರ ಮತ್ತು ಮರದ ಕೊಂಬೆ ಬಿದ್ದು ವಿದ್ಯುತ್ ತಂತಿಗಳೂ ಕೂಡ ಹಾನಿ ಆಗಿವೆ.
ಮೇ ತಿಂಗಳಿಂದ ಜೂನ್ 5ರ ವರೆಗೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಬರೋಬ್ಬರಿ 3ಕೋಟಿ 24ಲಕ್ಷ ಮೌಲ್ಯದ 4312 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 10.04ಕೋಟಿ ಮೌಲ್ಯದ 762 ಟ್ರಾನ್ಸ್ಫಾರ್ಮರ್ ಗಳಿಗೆ ಹಾನಿಯಾಗಿದೆ. 2.72ಲಕ್ಷ ಮೌಲ್ಯದ ತಂತಿ ಹಾಗೂ 2.8ಲಕ್ಷ ಮೌಲ್ಯದ ಡಿಪಿ ಸ್ಟ್ರಕ್ಚರ್ ಗೆ ಹಾನಿಯಾಗಿದ್ದು ಒಟ್ಟಾರೆ 13 ಕೋಟಿಯಷ್ಟು ಬೆಸ್ಕಾಂಗೆ ನಷ್ಟವಾಗಿದೆ ಎನ್ನಲಾಗಿದೆ
ಒಟ್ಟಿನಲ್ಲಿ ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಭಾರೀ ನಷ್ಟವಾಗಿದ್ದು, ಬೆಸ್ಕಾಂನ ನಷ್ಟದಲ್ಲಿ ಬಹುಪಾಲು ಬೆಂಗಳೂರೂ ನಗರ ವ್ಯಾಪ್ತಿಯದ್ದೇ ಇದೆ. ಈಗ ಅಷ್ಟೇ ಮುಂಗಾರು ಆರಂಭವಾಗಿರೊದ್ರಿಂದ ಮುಂದಿನ ದಿನದಲ್ಲಿ ಸಹಜವಾಗಿ ಹೆಚ್ಚಿನ ಮಳೆಯಾಗಲಿದೆ.