ಬಾಲಿವುಡ್ ನಟಿ ಹಾಗೂ ನೂತನ ಸಂಸದೆ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಪರ ವಿರೋದಗಳು ಕೇಳಿ ಬರ್ತಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ತಮ್ಮ ಅಭಿಪ್ರಾಐ ವ್ಯಕ್ತಪಡಿಸಿದ್ದಾರೆ. ಇದೀಗ ಕಪಾಳಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ಪರವಾಗಿ ನಿಂತವರ ವಿರುದ್ಧ ಕಂಗನಾ ಕಿಡಿ ಕಾರಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ವಾಗ್ದಾಳಿ ನಡೆಸುತ್ತಿದ್ದಾರೆ. X ನಲ್ಲಿ ಪೋಸ್ಟ್ ಹಂಚಿಕೊಂಡ ಕಂಗನಾ, “ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ ಅಥವಾ ಕಳ್ಳ ಯಾವಾಗಲೂ ಅಪರಾಧ ಮಾಡುವ ಹಿಂದೆ ಬಲವಾದ ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಾರಣವನ್ನು ಹೊಂದಿರುತ್ತಾನೆ. ಕಾರಣವಿಲ್ಲದೆ ಯಾರೂ ಯಾವುದೇ ಅಪರಾಧವನ್ನು ಮಾಡುವುದಿಲ್ಲ, ಆದರೂ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೈಲಿಗೆ ಹಾಕಲಾಗುತ್ತದೆ” ಎಂದು ಬರೆದಿದ್ದಾರೆ.
‘ನೆನಪಿಡಿ, ಯಾರೊಬ್ಬರ ದೇಹವನ್ನು ಸ್ಪರ್ಶಿಸುವುದು ಮತ್ತು ಅವರ ಮೇಲೆ ಹಲ್ಲೆ ಮಾಡುವುದನ್ನು ನೀವು ಒಪ್ಪಿದರೆ, ನೀವು ಅತ್ಯಾಚಾರ ಅಥವಾ ಕೊಲೆಯನ್ನು ಸಹ ಬೆಂಬಲಿಸಿದಂತೆಯೇ. ನಿಮ್ಮ ಮಾನಸಿಕ ಅಪರಾಧ ಪ್ರವೃತ್ತಿಯನ್ನು ನೀವು ಪರಿಗಣಿಸಬೇಕು. ಯೋಗ ಮತ್ತು ಧ್ಯಾನ ಮಾಡಲು ನಾನು ನಿಮಗೆ ಸಲಹೆ ನೀಡುತ್ತೇನೆ. ಯಾರ ಮೇಲೂ ಇಷ್ಟೊಂದು ಕೋಪ, ದ್ವೇಷ, ಅಸೂಯೆ ಇಟ್ಟುಕೊಳ್ಳಬೇಡಿ, ನಿಮ್ಮನ್ನು ಉದ್ಧಾರ ಮಾಡಿಕೊಳ್ಳಿ.” ಎಂದು ಪೋಸ್ಟ್ ಮಾಇಡದ್ದಾರೆ.
ಇಂಡಸ್ಟ್ರಿಯಲ್ಲಿ ಕಂಗನಾಗೆ ಸಾಕಷ್ಟು ಬೆಂಬಲಿಗರಿದ್ದರೂ ಶತ್ರುಗಳು ಹೆಚ್ಚಾಗಿಯೇ ಇದ್ದಾರೆ. ಕಂಗನಾ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಅನೇಕ ಬಾಲಿವುಡ್ ಮಂದಿ ವಿವಿಧ ಪ್ರತಿಕ್ರಿಯೆಗಳು ನೀಡಿದ್ದಾರೆ. ಖ್ಯಾತ ಗಾಯಕ ವಿಶಾಲ್ ದಾದ್ಲಾನಿ ಕಂಗನಾಗೆ ಹೊಡೆದು ಕೆಲಸ ಕಳೆದುಕೊಂಡ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿದ್ರು. ಮಹಿಳಾ ಸಿಬ್ಬಂದಿ ಕುಲ್ವಿಂದರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಮಹಿಳೆ ಬಗ್ಗೆ ಮಾತನಾಡಿದ ಗಾಯಕ ವಿಶಾಲ್ ದಾದ್ಲಾನಿ, ‘ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಆ ಮಹಿಳೆಯ ಕೋಪವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆ ಸಿಐಎಸ್ಎಫ್ ಮಹಿಳಾ ಭದ್ರತಾ ಯೋಧನ ವಿರುದ್ಧ ಕ್ರಮ ಕೈಗೊಂಡು ಆಕೆ ಕೆಲಸ ಕಳೆದುಕೊಂಡರೆ ನಾನೇ ಆಕೆಗೆ ಕೆಲಸ ಕೊಡಿಸುತ್ತೇನೆ’ ಎನ್ನವ ಮೂಲಕ ಮಹಿಳೆಯ ಪರವಾಗಿ ನಿಂತಿದ್ದಾರೆ.