ಚಿಕ್ಕೋಡಿ :– ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಸಚಿವ ಸತೀಶ ಜಾರಕಿಹೋಳಿ ಸ್ವ ಶಾಸಕರ ವಿರುದ್ದ ಗರಂ ಹಿನ್ನಲೆ ನಿನ್ನೆ ಚಿಕ್ಕೋಡಿಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ಪತ್ರಿಕಾಗೋಷ್ಠಿ ಮಾಡಿದ್ದರು.
ಇಂದು ಬೆಳಿಗ್ಗೆ ಮಹೇಂದ್ರ ತಮ್ಮನ್ನವರು ಅಥಣಿ ಪಟ್ಟಣದಲ್ಲಿರುವ ಸ ಶಾಸಕ ಲಕ್ಷ್ಮಣ ಸವದಿ ಮನೆಗೆ ಬೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆ. ಇಬ್ಬರ ಬೇಟಿ ಬಳಿಕ ಮತ್ತೆ ರಾಜಕೀಯ ತಿರುವು ಪಡೆದುಕೊಳ್ಳುತ್ತಾ ಕಾಯ್ದು ನೋಡಬೇಕಿದೆ.
ಸತೀಶ ಜಾರಕಿಹೋಳಿ ಸವದಿ ವಿರುದ್ದ ಬೇಸರ ವ್ಯಕ್ತ ಪಡಿಸಿದರು ಇನ್ನೂ ಕೂಡಾ ಸವದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿನ್ನೆ ಅಥಣಿ ಪಟ್ಟಣದಲ್ಲಿ ಸತೀಶ ಜಾರಕಿಹೋಳಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಟಿ ನೀಡಿ ಧನ್ಯವಾದ ತಿಳಿಸಿದ್ದಾರೆ. ಆದರೆ, ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಸತೀಶ ಹೋಗಿಲ್ಲ ಎನ್ನಲಾಗಿದೆ.