ಬೆಂಗಳೂರು:- ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಪುತ್ರಿಗೆ ಥಳಿಸಿ ಮನೆಯಿಂದ ಹೊರದಬ್ಬಿ ಬೀಗ ಹಾಕಿಕೊಂಡು ಪರಾರಿಯಾದ ಘಟನೆ ಜರುಗಿದೆ.
ವಿಜಯಲಕ್ಷ್ಮೀ ಜೊತೆ ಮಗಳು ಮನೆ ಮುಂದೆ ಗೋಳಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬೀಗ ಒಡೆದು ತಾಯಿ ಹಾಗೂ ಮಗಳನ್ನು ಮನೆಗೆ ಬಿಟ್ಟಿದ್ದಾರೆ. ಜೊತೆಗೆ ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪತಿ ಪ್ರಸನ್ನಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
18 ವರ್ಷದ ಮಗಳಿಗೂ ದಿನನಿತ್ಯ ತೊಂದರೆ ನೀಡುತ್ತಿದ್ದು, ಕಾಲೇಜಿಗೂ ಹೋಗದಂತೆ ತಡೆದು ಹಣ ಕೊಟ್ಟವರ ಜೊತೆ ಮಲಗುವಂತೆಯೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸಧ್ಯ ಪ್ರಕರಣ ದಾಖಲಿಸಿದ ಪೊಲೀಸರು, ಬೀಗ ಹೊಡೆದು ತಾಯಿ ಹಾಗೂ ಮಗಳನ್ನ ಮನೆಗೆ ಬಿಟ್ಟಿದ್ದಾರೆ.