ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರೀ ಮಳೆ ಸುರಿದಿದ್ದು, ರಸ್ತೆಗಳೆಲ್ಲಾ ನದಿಯಂತಾಗಿದೆ.
ನಗರದ ಟೌನ್ ಹಾಲ್, ಕೆಆರ್ ಮಾರ್ಕೆಟ್, ಗಿರಿನಗರ, ವಿಜಯನಗರ, ಚಾಮರಾಜಪೇಟೆ ಸೇರಿ ನಗರದ ಹಲವೆಡೆ ಮಳೆಯಾಯಿತು. ರಸ್ತೆಗಳೆಲ್ಲ ನದಿಯಂತಾಗಿ ಸವಾರರು ಹೈರಾಣಾದರು. ಜೊತೆಗೆ ವ್ಯಾಪಾರಸ್ಥರು ಕೂಡ ಕಂಗಾಲಾದರು. ಅತ್ತ ನೆಲಮಂಗಲದಲ್ಲೂ ಮಳೆ ಅಬ್ಬರಿಸಿದೆ. ಗಾಳಿ ಸಹಿತ ಮಳೆಗೆ ಜನರು ಪರದಾಡಿದರು.
ಬುಧವಾರ ತುಮಕೂರು ಜಿಲ್ಲಾದ್ಯಂತ ಭರ್ಜರಿ ಮಳೆಯಾಗಿದೆ. ಸುಮಾರು 2 ಗಂಟೆ ಕಾಲ ಸುರಿದ ಮಳೆಗೆ ಅಂತರಸನಹಳ್ಳಿ ಅಂಡರ್ ಪಾಸ್ ಜಲಾವೃತ್ತವಾಗಿತ್ತು. ಇದರಿಂದ ಪಾವಗಡ, ಮಧುಗಿರಿ, ಕೊರಟಗೆರೆಗೆ ಹೋಗುವ ವಾಹನಗಳು ಸಿಕ್ಕಿದವು. ತುಮಕೂರಿನ ಶಿರಾ ಗೇಟ್ ರಸ್ತೆಯಲ್ಲಿ ಬ್ರಿಡ್ಜ್ ಕಾಮಗಾರಿಯಿಂದ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಇದರಿಂದ ನಿವಾಸಿಗಳು ರಾತ್ರಿಯಿಡೀ ಪರದಾಡಿದರು.
ಚಿತ್ರದುರ್ಗದ ಹಲವೆಡೆ ಮಳೆ ಅಬ್ಬರಿಸಿತು. ಹಿರಿಯೂರು ಪಟ್ಟಣದ ಟಿಬಿ ವೃತ್ತದ ರಸ್ತೆ ಮಳೆ ನೀರಿಗೆ ಮುಚ್ಚಿ ಹೋಗಿತ್ತು. ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ತರಕಾರಿಗಳೆಲ್ಲ ಕೊಚ್ಚಿ ಹೋದವು. ಮೊಳಕಾಲ್ಮೂರಿನ ಕೊಂಡ್ಲಹಳ್ಳಿ ಹಳ್ಳದಲ್ಲಿ ಜಿಂಕೆ ಕೊಚ್ಚಿಹೋಗಿತ್ತು. ಸ್ಥಳೀಯರು ಜಿಂಕೆ ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.