ಲುಧಿಯಾನ:- ಸ್ನೇಹಿತನನ್ನೇ ಬರ್ಬರವಾಗಿ ಮೂವರು ಗೆಳೆಯರು ಕೊಲೆಗೈದ ಘಟನೆ ಚಂಡೀಗಢದ ಬರೇವಾಲ್ ಗ್ರಾಮದ ಸುವಾ ರಸ್ತೆಯಲ್ಲಿ ಜರುಗಿದೆ.
ಘಟನಾ ಸ್ಥಳಕ್ಕೆ ಸರಭನಗರ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕೊಲೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಬರೇವಾಲ್ ಗ್ರಾಮದ ವಿಕಾಸ್ ಕುಮಾರ್ ಮೃತ ದುರ್ದೈವಿ. ಆತ ಕೂಲಿ ಕಾರ್ಮಿಕನಾಗಿದ್ದ. ಪೊಲೀಸರು ಆತನ ಮೂವರು ಸ್ನೇಹಿತರಾದ ಸೂರಜ್ ಕುಮಾರ್, ಮನೋಜ್ ಸಾಹ್ನಿ ಮತ್ತು ಅಜಯ್ ಸಾಹ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
IND V/S IRE: ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆ ಬರೆದ ರೋಹಿತ್ ಶರ್ಮಾ..!
ಕೊಲೆಯಾದ ಯುವಕನ ಸಹೋದರ ಬಿಕು ಕುಮಾರ್ ಹೇಳಿಕೆಯ ನಂತರ ಎಫ್ಐಆರ್ ದಾಖಲಿಸಲಾಗಿದೆ. ಈತನ ಸಹೋದರ ವಿಕಾಸ್ ಕುಮಾರ್ ಪೇಂಟರ್ ಆಗಿದ್ದು, ರಾತ್ರಿ 10.30 ಗಂಟೆಯಾದರೂ ಮನೆಗೆ ಬಾರದೇ ಇದ್ದಾಗ ಆತನಿಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಸಹೋದರನನ್ನು ಹುಡುಕುತ್ತಾ ಬಿಕು ಕುಮಾರ್ ಬರೇವಾಲ್ನ ಸುವಾ ರಸ್ತೆಯನ್ನು ತಲುಪಿದಾಗ, ಮೂವರು ವ್ಯಕ್ತಿಗಳು ತನ್ನ ಸಹೋದರನನ್ನು ಥಳಿಸುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ನಾನು ನೋಡಿದಾಗ ನನ್ನ ಸಹೋದರನ ಗೆಳೆಯರಾದ ಮನೋಜ್ ಮತ್ತು ಅಜಯ್ ಆತನನ್ನು ಹಿಡಿದಿದ್ದರೆ, ಸೂರಜ್ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಆತನ ದೇಹವನ್ನು ಎಸೆದಿದ್ದಾರೆ. ಆಗ ಬಿಕು ಕುಮಾರ್ ಕೂಗಿಕೊಂಡಿದ್ದಾನೆ. ಇದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೆ ನಮ್ಮ ಕುಟುಂಬದವರಿಗೆ ಫೋನ್ ಮೂಲಕ ವಿಷಯ ತಿಳಿಸಿ ವಿಕಾಸ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ವೈದ್ಯರು ಆತ ಆಸ್ಪತ್ರೆಗೆ ಬರುವಷ್ಟರಲ್ಲಿ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.