ಅಂತೂ ಇಂತೂ ಲೋಕಸಭಾ ಚುನಾವಣೆ ಬಳಿಕ ಫಲಿತಾಂಶ ಕೂಡ ಹೊರ ಬತ್ತು. ಗೆದ್ದವರ ಮುಖದಲ್ಲಿ ಸ್ವಲ್ಪ ಮಂದಹಾಸ ಇದ್ರೆ, ಸೋತವರು ಸ್ವಲ್ಪ ಕಂಗಾಲಾಗಿದ್ದಾರೆ. ಆದ್ರೆ ಈ ಮೆಸೇಜ್ ನೋಡಿದ್ರೆ ಸೋತವರ ಮುಖದಲ್ಲೂ ನಗು ಬರದೇ ಇರದು.. ಹಾಗಿದ್ರೆ ಏನಿದು ಸ್ಟೋರಿ,, ಅಷ್ಟಕ್ಕೂ ಅದು ಯಾವ ಮೆಸೇಜ್ ಎಲ್ಲವನ್ನೂ ತಿಳಿಯೋಣ ಸುದ್ದಿ ಪೂರ್ತಿ ಓದಿ..
ಮಂಡ್ಯದಲ್ಲಿ ಭರ್ಜರಿ ಗೆಲುವು.. ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ ಸುಮಲತಾ!
ಭಾರತ ಮೈತ್ರಿಕೂಟವು ಎನ್ಡಿಎಗೆ ತೀವ್ರ ಪೈಪೋಟಿ ನೀಡಿದ್ದು ಸುಳ್ಳಲ್ಲ. ಚುನಾವಣಾ ಫಲಿತಾಂಶ ಹೊರ ಬರ್ತಿದ್ದಂತೆ ಗೆದ್ದವರು ಪಟಾಕಿ ಹೊಡೆದು ಸಂಭ್ರಮಿಸಿದ್ರೆ ಸೋತವರು, ಸೋಲಿಗೆ ಕಾರಣ ಹುಡುಕೋದ್ರಲ್ಲಿ ನಿರತರಾಗಿದ್ದಾರೆ. ಇತ್ತ ಸಾಮಾಜಿಕ ಜಾಲತಾಣ ಬಳಕೆದಾರರು ಸಂದೇಶ ರವಾನೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸ್ ಅಪ್ ನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಗಂಭೀರ ಹಾಗೂ ತಮಾಷೆ ಸಂದೇಶಗಳು ವೈರಲ್ ಆಗ್ತಿವೆ. ಅದ್ರಲ್ಲೊಂದು ಸಂದೇಶ ಎಲ್ಲರ ಗಮನ ಸೆಳೆದಿದೆ. ಚುನಾವಣೆ ಅಂದ್ಮೇಲೆ ಸೋಲು – ಗೆಲುವು ಇದ್ದಿದ್ದೆ. ಆದ್ರೆ ಈ ಬಾರಿ ಗೆದ್ದವರ ಮುಖದಲ್ಲಿ ಮಾತ್ರವಲ್ಲ ಸೋತವರ ಮುಖದಲ್ಲೂ ನಗು ಮೂಡಿದೆ. ಇದಕ್ಕೆ ಕಾರಣ, ಭಾರತದ ಮಹಾಜನತೆ ನೀಡಿದ ತೀರ್ಪು.
ವಾಟ್ಸ್ ಅಪ್ ನಲ್ಲಿ ಈ ಸಂದೇಶ ಹರಿದಾಡುತ್ತಿದೆ. ಈ ಬಾರಿ ಚುನಾವಣೆಯನ್ನು ಮೋಜು, ತಮಾಷೆಯೆಂದು ಅಲ್ಲಿ ಬಿಂಬಿಸಲಾಗಿದೆ. ಬಿಜೆಪಿ ಸರ್ಕಾರ ರಚಿಸುತ್ತಿರುವುದರಿಂದ ಸಂಭ್ರಮಾಚರಣೆಯಲ್ಲಿದೆ ಎಂದು ಬರೆಯಲಾಗಿದೆ. ಬರೀ ಇಷ್ಟೆ ಅಲ್ಲ, ಕಾಂಗ್ರೆಸ್ ಕೂಡ ಸಂಭ್ರಮದಲ್ಲಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಸೀಟು. ಕಾಂಗ್ರೆಸ್ 100 ಸೀಟು ದಾಟಿದ ಸಂಭ್ರಮದಲ್ಲಿದೆ. ಎಸ್ಪಿ, ಆರ್ಜೆಡಿ, ತಾವು ಕಳೆದುಕೊಂಡ ಭೂಮಿಯನ್ನು ಮರಳಿ ಪಡೆಯುತ್ತಿರುವುದನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲ, ಇಲ್ಲಿ ತಾವೇ ಬಾಸ್ ಎನ್ನುವ ಕಾರಣಕ್ಕೆ ಎನ್ಸಿಪಿ-ಎಸ್ಪಿ ಮತ್ತು ಶಿವಸೇನೆ ಸಂತೋಷವಾಗಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ತಮ್ಮ ಪಕ್ಷವನ್ನು ವೈಫಲ್ಯದಿಂದ ಪಾರು ಮಾಡಿದ ಕಾರಣ ಟಿಎಂಸಿ ಸಂತಸಗೊಂಡಿದೆ. ತಮ್ಮ ನೆಚ್ಚಿನ ಪಕ್ಷ ಗೆದ್ದಿರುವುದರಿಂದ ಜನರು ಸಂತಸಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮ ಪ್ರಧಾನ ಕಚೇರಿಯಲ್ಲಿ ಒಟ್ಟಿಗೆ ವಿಜಯೋತ್ಸವ ಆಚರಿಸುವುದನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಮೆಸ್ಸೇಜ್ ನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಕೊನೆಯಲ್ಲಿ, ಮುಖ್ಯವಾಗಿ ಚುನಾವಣಾ ಇಲಾಖೆ ಖುಷಿಯಲ್ಲಿದೆ. ಇವಿಎಂ ಮೇಲೆ ಯಾವುದೇ ಆರೋಪವಿಲ್ಲ ಎನ್ನುವುದು ಅದ್ರ ಖುಷಿಗೆ ಕಾರಣವಾಗಿದೆ ಎಂದು ಸಂದೇಶವನ್ನು ನೀವು ಕಾಣಬಹುದಾಗಿದೆ.