ಬೆಂಗಳೂರು/ಮಂಡ್ಯ:- 2024 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕುಮಾರಸ್ವಾಮಿ ಅವರಿಗೆ ಸುಮಲತಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
World Cup 2024: ಭಾರತ ತಂಡದ ಬೌಲಿಂಗ್ ದಾಳಿಗೆ ನಲುಗಿದ ಐರ್ಲೆಂಡ್… 96 ಕ್ಕೆ ಆಲೌಟ್!
ಅಲ್ಲದೇ ಕುಮಾರಸ್ವಾಮಿಗೆ ಅಭಿನಂದನೆಯಲ್ಲೇ ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ಮತಗಳು ಆಮಿಷ, ಮಾರಾಟಕ್ಕೆ ಇಲ್ಲ ಎಂದು ತೋರಿಸಿದ್ದಾರೆ. ಮತ ಮಾರಾಟಕ್ಕಿಲ್ಲ ಎಂದು ಮಂಡ್ಯದ ಜನತೆ ತೋರಿಸಿದ್ದಾರೆ. ಪುಕ್ಸಟ್ಟೆ ಭಾಗ್ಯಗಳ ಮೂಲಕ ಜನರನ್ನು ವಂಚಿಸಲು ಆಗಲ್ಲ. ಮಂಡ್ಯ ಜನತೆಗೆ ಮೋಸ ಮಾಡಲು ಆಗಲ್ಲವೆಂದು ಸಾಬೀತಾಗಿದೆ. ಆದ್ದರಿಂದ ಮಂಡ್ಯ ಜಿಲ್ಲೆಯ ಜನರಿಗೂ ಸಹ ಅಭಿನಂದನೆ. ಮೋದಿ ನಾಯಕತ್ವದಲ್ಲಿ ಕೆಲಸ ಮಾಡಲು ಆಯ್ಕೆಯಾದ ಮಂಡ್ಯದ ನೂತನ ಸಂಸದ ಕುಮಾರಸ್ವಾಮಿ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಅಂಬರೀಶ್ ಸಾವಿನ ವಿಷಯ ಸೇರಿದಂತೆ ವೈಯಕ್ತಿ ವಿಚಾರಗಳನ್ನೆಲ್ಲಾ ತೆಗೆದು ಕುಮಾರಸ್ವಾಮಿ ಅವರು ಸುಮಲತಾರನ್ನು ಜರಿದಿದ್ದರು. ಇದಕ್ಕೆ ಸುಮಲತಾ ಹಾಗೂ ಅವರ ಬೆಂಬಲಿಗರು ಕೂಡ ತಿರುಗೇಟು ನೀಡಿದ್ದರು. ಅಲ್ಲದೇ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕವೂ ಇವರಿಬ್ಬರ ನಡುವಿನ ರಾಜಕೀಯ ಕಿತ್ತಾಟ ಮುಂದುವರೆದಿತ್ತು. ಆದ್ರೆ, ಇದೀಗ ಪರಿಸ್ಥಿತಿ ಬದಲಾಗಿದ್ದು, ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ದ್ವೇಷ ಬಿಟ್ಟು ಸ್ನೇಹ ಶುರುವಾಗಿದೆ