ಬೆಂಗಳೂರು:– ಮಂಜುನಾಥ್ ನೋಡಿ ಜನರು ಮತ ಹಾಕಿದ್ದಾರಷ್ಟೆ, ಬಿಜೆಪಿಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತತ್ವಜ್ಞಾನಿಗಳ ಹಾಗೆ ಮಾತಾಡುತ್ತಾ ಅಧಿಕಾರದ ರಾಜಕೀಯ ಸೋತಿದೆ ವಿಶ್ವಾಸದ ರಾಜಕೀಯ ಗೆದ್ದಿದೆ, ಭಾವನೆ ಸೋತಿದೆ ಬದಕು ಗೆದ್ದಿದೆ ಅಂತ ಹೇಳಿದರು. ಬಿಜೆಪಿಯವರು ಈ ಬಾರಿ 400 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಅಂತ ಹೇಳುತ್ತಿದ್ದರು ಆದರೆ ಅವರಿಗದು ಸಾಧ್ಯವಾಗಿಲ್ಲ, ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ 1 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 10 ಗೆದ್ದಿದ್ದು ಸೀಟು, ಇದರಿಂದ ಜನ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿದ್ದಾರೆ ಅಂತ ಸಾಬೀತಾಗುತ್ತದೆ, 15 ಸೀಟು ಗೆಲ್ಲುವ ನಿರೀಕ್ಷೆ ಇತ್ತು ಆದರೆ ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಜನ ತಮಗೊಂದು ಸಂದೇಶ ನೀಡಿದ್ದಾರೆ, ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ, ಗೆದ್ದಿರುವ ಡಾ ಮಂಜುನಾಥ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅಲ್ಲಿ ಗೆದ್ದಿರೋದು ಒಬ್ಬ ವ್ಯಕ್ತಿ, ಬಿಜೆಪಿಯಲ್ಲ, ತನ್ನ ಕ್ಷೇತ್ರದಲ್ಲ್ಲೂ ಸುರೇಶ್ ಗೆ ಕಡಿಮೆ ಲೀಡ್ ಸಿಕ್ಕಿರೋದನ್ನು ಗಮನಿಸಿದರೆ ಮಂಜುನಾಥ್ ಅವರ ಪ್ರಭಾವ ಎಷ್ಟರಮಟ್ಟಿಗೆ ಗೆಲುವಿನಲ್ಲಿ ಸಹಾಯ ಮಾಡಿದೆ ಅಂತ ಗೊತ್ತಾಗುತ್ತದೆ ಎಂದು ಶಿವಕುಮಾರ್ ಹೇಳಿಕೆ ನೀಡಿದ್ದಾರೆ.