ಬಳ್ಳಾರಿ:- ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ ನಡೆದಿರುವ ಘಟನೆ ಬಳ್ಳಾರಿ ವಿಮ್ಸ್ ನಲ್ಲಿ ಜರುಗಿದೆ.
ಲೋಕಸಭಾ ಕ್ಲೈಮ್ಯಾಕ್ಸ್ ಗೆ ಕ್ಷಣಗಣನೆ.. ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಅಪ್ಡೇಟ್ಸ್!
ಸರಿಯಾದ ಚಿಕಿತ್ಸೆ ನೀಡಿಲ್ಲ ಅಂತ ಆರೋಪಿಸಿ ವೈದ್ಯೆಯ ಮೇಲೆ ಬಳ್ಳಾರಿಯ ಗುಡಾರನಗರ ನಿವಾಸಿ ನಾಗೇಶ್ ಎನ್ನುವರಿಂದ ಹಲ್ಲೆ ನಡೆದಿದೆ. ಚಿಕಿತ್ಸೆ ವೇಳೆ ವಿಮ್ಸ್ ನಲ್ಲಿ ರೋಗಿ ಯಲ್ಲಪ್ಪ ಸಾವನ್ನಪ್ಪಿದ್ದಾರೆ. ವೈದ್ಯೆ ಸಂಧ್ಯಾ ಮೃತ ಯಲ್ಲಪ್ಪನನ್ನ ಚಿಕಿತ್ಸೆ ಮಾಡುತ್ತಿದ್ದರು. ವೈದ್ಯಯ ಡಾ.ಸಂಧ್ಯಾರ ಕೂದಲು ಎಳೆದಾಡಿ ಮೃತನ ಸಂಬಂಧಿ ಹಲ್ಲೆ ಮಾಡಿದ್ದಾರೆ.
ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ರಾತ್ರೋರಾತ್ರಿ ವಿಮ್ಸ್ ವೈದ್ಯರ ಧರಣಿ ಮಾಡಿದ್ದಾರೆ. ಹಲ್ಲೆ ಖಂಡಿಸಿ ವಿಮ್ಸ್ ಮುಂಭಾಗ ಧರಣಿ ಮಾಡಿದ್ದಾರೆ.
ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರ ಆಗಮನ ಪರಿಶೀಲನೆ ಮಾಡಿದ್ದಾರೆ. ಹಲ್ಲೆ ಮಾಡಿದ ನಾಗೇಶ್ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಹಲ್ಲೆಕೋರನ ವಶಕ್ಕೆ ಪಡೆದ ಮೇಲೆ ವೈದ್ಯರು ಧರಣಿ ಕೈಬಿಟ್ಟಿದ್ಜಾರೆ.