ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಕೋಳಿ ಪಾರ್ಮ್ ನ ಕೆಲವು ಕೋಳಿಗಳು ನೀರು ಪಾಲಾದ್ರೆ ಇನ್ನೂ ಕೆಲವು ಕೋಳಿಗಳು ಚಿರತೆಗೆ ಆಹಾರವಾದ ಘಟನೆ ಜರುಗಿದೆ.
ಅಡುಗೆ ಸರಿಯಾಗಿ ಮಾಡ್ತಿಲ್ಲ.. ಬೆಂಗಳೂರು ವಿಶ್ವವಿದ್ಯಾಲಯದ ಮುಂದೆ ವಿದ್ಯಾರ್ಥಿಗಳ ಪ್ರೊಟೆಸ್ಟ್!
ಲೊಕೇಶ ಎನ್ನುವವರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೋಳಿ ಪಾರ್ಮ್ ನಲ್ಲಿ ಕೋಳಿ ಸಾಕಿದ್ದರು. ಇನ್ನೇನು ನಾಳೆ ಕೋಳಿ ಮಾರಾಟ ಮಾಡಬೇಕಿತ್ತು. ಅಷ್ಟರಲ್ಲೆ ನಿನ್ನೆ ರಾತ್ರಿ ಸುರಿದ ಧಾರಾಕರ ಮಳೆಯ ನೀರು ಕೋಳಿ ಪಾರ್ಮ್ ಗೆ ನುಗ್ಗಿದೆ. ಇನ್ನೂ ಮಳೆಯಿಂದ ರಕ್ಷಿಸಿಕೊಳ್ಳಲು ಚಿರತೆಯೊಂದು ಕೋಳಿ ಪಾರ್ಮ್ ಗೆ ನುಗ್ಗಿದ್ದು, ಬಾಯಿಗೆ ಸಿಕ್ಕ ಕೋಳಿಗಳನ್ನು ಹಿಡಿದು ತಿಂದು ತೇಗಿ ಪರಾರಿಯಾಗಿದೆ. ಇದ್ರಿಂದ 600ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ.